ಕುಡಿಯುವ ನೀರಿಗಾಗಿ ಜಗಳ ; ಮಚ್ಚಿನಿಂದ ಕೊಚ್ಚಿದ? ಶಾಕಿಂಗ್

ಗುರುವಾರ, 29 ಆಗಸ್ಟ್ 2019 (15:45 IST)
ಕುಡಿಯುವ ನೀರಿಗಾಗಿ ನಡೆಯಬಾರದ ಘಟನೆ ನಡೆದುಹೋಗಿದೆ.

ವ್ಯಕ್ತಿಯ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲಾಗಿದೆ. (60) ವರ್ಷ ಹಲ್ಲೆಗೊಳಗಾದ ವ್ಯಕ್ತಿ ಗಾಯಗೊಂಡಿದ್ದಾನೆ.

ಕುಡಿಯುವ ನೀರಿಗೋಸ್ಕರ ಇಬ್ಬರ ನಡುವೆ ತಗಾದೆ ಶುರುವಾಗಿದೆ. ಆ ಬಳಿಕ ಕೋಪದಲ್ಲಿ ಮಚ್ಚಿನಿಂದ ಕೊಚ್ಚಿ  ಮಾರಣಾಂತಿಕ‌ ಹಲ್ಲೆ ಮಾಡಿದ್ದಾನೆ ವಿಜಯ್ ಕುಮಾರ್. 

ವಿಜಯ್ ಕುಮಾರ್ ಮತ್ತು ನರಸಿಂಹಪ್ಪ ಕುಟುಂಬಗಳ ನಡುವೆ ಹಳೇ ದ್ವೇಷ ಇತ್ತು. ಆದರೆ ಕುಡಿಯುವ ನೀರಿನ ವಿಷಯದಲ್ಲಿ ಶುರುವಾದ ಜಗಳ ಹಳೇ ದ್ವೇಷವನ್ನ ಕೆಣಕಿ ಹಲ್ಲೆಯಲ್ಲಿ ಅಂತ್ಯಗೊಂಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿ‌ನ ತುಳುವನೂರಿನಲ್ಲಿ ಘಟನೆ ನಡೆದಿದೆ.

ಹಲ್ಲೆಗೊಳಗಾದ ನರಸಿಂಹಪ್ಪನ ಸ್ಥಿತಿ ಚಿಂತಾಜನಕವಾಗಿದೆ. ಕೆಂಚಾರ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ