ಸಿಎಂ ಸಿದ್ದರಾಮಯ್ಯ ಬಗ್ಗೆ ಅವಾಚ್ಯವಾಗಿ ಮಾತಾಡಿದ್ದಕ್ಕೆ ವ್ಯಕ್ತಿಗೆ ಗೂಸ

ಭಾನುವಾರ, 4 ಜೂನ್ 2023 (13:52 IST)
ಸಿಎಂ ಸಿದ್ದರಾಮಯ್ಯ ಬಗ್ಗೆ ಅವಾಚ್ಯವಾಗಿ ಮಾತಾಡಿದ ವ್ಯಕ್ತಿಗೆ ಸಿದ್ದರಾಮಯ್ಯ ಅಭಿಮಾನಿಗಳು ಥಳಿಸಿದ್ದಾರೆ.ಸಿದ್ದರಾಮಯ್ಯ ಫೋಸ್ಟರ್ ನೋಡಿ ವ್ಯಕ್ತಿ ಬೈಯುತ್ತಿದ್ದ, ವ್ಯಕ್ತಿಯ ದುರ್ವರ್ತನೆ  ಕಂಡು ವ್ಯಕ್ತಿಯನ್ನ ಸೆರೆ ಹಿಡಿದ ಸಿದ್ದು ಅಭಿಮಾನಿಗಳು ಸಿದ್ದರಾಮಯ್ಯ ಪೋಸ್ಟರ್ ಬಳಿ ಕರೆದೊಯ್ದು ಕ್ಷಮೆ ಕೇಳುವಂತೆ ಒತ್ತಾಯ ಮಾಡಿದ್ದಾರೆ.ಈ ವೇಳೆ ವ್ಯಕ್ತಿ ಕೆನ್ನೆಗೆ  ಸಿದ್ದರಾಮಯ್ಯ ಅಭಿಮಾನಿಗಳು ಬಾರಿಸಿದ್ದಾರೆ.ಸಿದ್ದರಾಮಯ್ಯ ಅಲ್ಲದೇ ಕುಮಾರಸ್ವಾಮಿ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದ.ಇನ್ನೂ ಘಟನೆ ನಗರದ ಕೆ ಪಿ ಅಗ್ರಹಾರದಲ್ಲಿ ನಡೆದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ