ಮಾಧ್ಯಮದ ಮುಂದೆ ನಮ್ಮದೆಲ್ಲ ಯಾವ ಕಷ್ಟ ಎಂದಿದ್ದೇಕೆ ಎಚ್ ಡಿ ರೇವಣ್ಣ

Sampriya

ಮಂಗಳವಾರ, 2 ಜುಲೈ 2024 (18:17 IST)
ಮೈಸೂರು: ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಬೇರಾರು ಇಲ್ಲ. ಸೂರಜ್ ರೇವಣ್ಣ ಮಹಾನ್ ದೈವಭಕ್ತನಾಗಿದ್ದು, ಅವನೂ ಈ ಪ್ರಕರಣದಿಂದ ಬೇಗ ಹೊರಬರುತ್ತಾನೆ ಎಂದು ಮಾಜಿ ಸಚಿವ ಎಚ್ ಡಿ ರೇವಣ್ಣ ಭರವಸೆ ವ್ಯಕ್ತ‍ಪಡಿಸಿದರು.

ಯುವಕನಿಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದಲ್ಲಿ ಪರಪ್ಪನ ಅಗ್ರಹಾರ ಸೇರಿದ ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರ ವಿಚಾರವಾಗಿ ಅವರ ತಂದೆ, ಮಾಜಿ ಸಚಿವ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

ನಾನು ಸೂರಜ್ ರೇವಣ್ಣ ಭೇಟಿಗೆ ಹೋಗಲ್ಲ. ಒಂದು ವೇಳೆ ಭೇಟಿಯಾದರೆ ನಾನೇನೂ ಹೇಳಿಕೊಟ್ಟೆ ಎಂಬ ಮಾತು ಬರುತ್ತದೆ. ಹೀಗಾಗಿ ನಾನು ಅವನನ್ನು ಭೇಟಿಯಾಗಲ್ಲ. ಸೂರಜ್ ರೇವಣ್ಣ ಮಹಾನ್ ದೈವ ಭಕ್ತನಾಗಿದ್ದು ಅವನು ಈ ಪ್ರಕರಣದಿಂದ ಬೇಗ ಹೊರಬರುತ್ತಾನೆ ಎಂಬ ಭರವಸೆಯಿದೆ.

ಎಂಥೆಂತವರಿಗೋ ಕಷ್ಟ ಬರುತ್ತದೆ, ಹಾಗಿರುವಾಗ ನಮ್ಮದು ಯಾವ ಕಷ್ಟ. ಸಹಜವಾಗಿ ದೇವೇಗೌಡ ಅವರು ನೋವಿನಲ್ಲಿದ್ದಾರೆ. ಎಲ್ಲದಕ್ಕೂ ಕಾಲದಲ್ಲಿ ಉತ್ತರ ಸಿಗುತ್ತದೆ. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ