ವರ್ಗಾವಣೆ ದಂಧೆ ಬಗ್ಗೆ ಹೆಚ್ ಡಿ ಕೆ ಸ್ಪೋಟಕ ಮಾಹಿತಿ..!

ಮಂಗಳವಾರ, 4 ಜುಲೈ 2023 (16:30 IST)
ಮಾಜಿ ಸಿಎಂ  ಹೆಚ್  ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ಸರ್ಕಾರದ ವಿರುದ್ದ ವರ್ಗಾವಣೆ ದಂದೆ ಆರೋಪವನ್ನು ಮಾಡ್ತಾ ಬಂದಿದ್ದಾರೆ. ನಿನ್ನೆ ವೈಎಸ್ ಟಿ ಕೆಲೆಕ್ಷನೆ ಆಗುತ್ತಿದೆ ಎಂದು ಆರೋಪಿಸಿದ್ದ ಕುಮಾರಸ್ವಾಮಿ,ಸಾರಿಗೆ ಇಲಾಖೆಯಲ್ಲಿ ವರ್ಗಾವಣೆಯ ಸಿಂಡಿಕೇಟ್ ಇದೆ.ಸಬ್‌ರಿಜಿಸ್ಟ್ರಾರ್‌ ಸಿಂಡಿಕೇಟ್ ಇದೆ.ಈಗ ಕಮರ್ಷಿಯಲ್ ಟ್ಯಾಕ್ಸ್ ಸಿಂಡಿಕೇಟ್ ಶುರುವಾಗಿದೆ.ವರ್ಗಾವಣೆ ಸಿಂಡಿಕೇಟ್ ಶುರುವಾಗಿದೆ.ಆಯಾ ಇಲಾಖೆಯಲ್ಲಿ ಕೆಲವು ಸಿಂಡಿಕೇಟ್ ಗಳು ಕೆಲಸ ಮಾಡ್ತಾ ಇವೆ.ಈ ಸಿಂಡಿಕೇಟ್ ಗಳು ಯಾರು ಯಾರು ವರ್ಗಾವಣೆ ಆಗಬೇಕು ಅಂತಾ ಲಿಸ್ಟ್ ಕೊಡ್ತಾರೆಅದರಂತೆ ವರ್ಗಾವಣೆ ನಡೆಯುತ್ತೆ ಎಂದಿದ್ದಾರೆ.ಹಾಗೇ ಶಾಸಕರ ಲೆಟರ್ ತೆಗೆದುಕೊಂಡು ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ಕೊಡಬೇಕು ಅಂತಾರೆ..30 ಲಕ್ಷ ಕೊಡದೇ ಹೊದರೆ ಕೆಲಸ ಆಗೊಲ್ಲ ಅಂತ ಸಿಎಂ ಕಚೇರಿಯಲ್ಲಿ ಹೇಳ್ತಾರೆ ಎಂದು ಸಿಎಂ ‌ಕಚೇರಿ ವಿರುದ್ದ ಆರೋಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ