ಹಿಜಬ್ ವಿವಾದ ಜೀವಂತವಾಗಿರಿಸಲು ಪ್ರಯತ್ನಿಸುತ್ತಾರೆ : ನಾಗೇಶ್

ಶನಿವಾರ, 19 ಫೆಬ್ರವರಿ 2022 (10:52 IST)
ತುಮಕೂರು : ಯಾರು ಮಕ್ಕಳನ್ನು ಪ್ರಚೋದಿಸಿ ಧರ್ಮ ಶಿಕ್ಷಣಕ್ಕಿಂತ ಮುಖ್ಯ ಎಂದು ಹೇಳಿಕೊಟ್ಟಿದ್ದಾರೆ.

ಅವರುಗಳು ಹಿಜಬ್ ವಿವಾದವನ್ನು ಇನ್ನೊಂದಿಷ್ಟು ದಿನ ಉಳಿಸಿಕೊಳ್ಳಲು ಪ್ರಯತ್ನ ಪಡುತಿದ್ದಾರೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆ ನೀಡಿದ್ದಾರೆ.

ಸಿದ್ದಗಂಗಾ ಮಠದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಸ್ಲಿಂ ಸಮಾಜದ ಅನೇಕ ಜನರು ಕೋರ್ಟನ್ನು ಮಧ್ಯಂತರ ತೀರ್ಪಿನ ಪರವಾಗಿ ಇದ್ದಾರೆ. ಅನೇಕ ಸಂಸ್ಥೆಗಳು ಕೋರ್ಟ್ ತೀರ್ಪಿನಂತೆ ನಡೆದುಕೊಂಡಿದ್ದಾರೆ. ಆದರೆ ಕೆಲವರು ಮಾತ್ರ ಅದನ್ನು ಪ್ರಚೋದಿಸುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ