2 ಸಾವಿರ ಮಂದಿಯ ಹೋಂ ಕ್ವಾರಂಟೈನ್ ಮುಗೀತು : ಡಿಸಿ ಖುಷ್

ಸೋಮವಾರ, 6 ಏಪ್ರಿಲ್ 2020 (17:49 IST)
ಕೊರೊನಾ ವೈರಸ್ ಮುಂಜಾಗ್ರತೆ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಮಾಡಲಾದ 2 ಸಾವಿರ ಮಂದಿಯ ಕ್ವಾರಂಟೈನ್ ಮುಗಿದಿದೆ.

ಉಡುಪಿ ಜಿಲ್ಲೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಮಂದಿ ವಿದೇಶದಿಂದ ಬಂದಿರುವವರ ಹೋಂ ಕ್ವಾರಂಟೈನ್ ಮುಗಿದಿದ್ದು, ಈ ವಿಚಾರ ಜಿಲ್ಲೆಗೆ ಸಂತಸ ತರುವ ವಿಚಾರವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನು ಹೊರಗಡೆಯಿಂದ ಕೊರೊನಾ ವೈರಸ್ ನಮ್ಮ ಜಿಲ್ಲೆಗೆ ಬರುವ ಲಕ್ಷಣಗಳಿಲ್ಲ.

ಜಿಲ್ಲೆಯ ಮೂರು ಪಾಸಿಟೀವ್ ಕೇಸ್‍ಗಳಿಗೆ ಇದೀಗ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸಂಪರ್ಕದಲ್ಲಿ ಇದ್ದವರಲ್ಲಿ ಯಾರಿಗೂ ಕೊರೊನಾ ಲಕ್ಷಣ ಕಂಡುಬಂದಿಲ್ಲ. ಹಾಗಾಗಿ ಸಾರ್ವಜನಿಕರು ಆತಂಕ ಪಡದೇ ಸಹಕರಿಸಬೇಕು ಎಂದು ತಿಳಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ