ಪಾರ್ಕಿಂಗ್ ವಿಚಾರಕ್ಕೆ ಶುರುವಾದ ಕಿರಿಕ್‌ಗೆ ಭೀಕರ ಹಲ್ಲೆ

geetha

ಶುಕ್ರವಾರ, 19 ಜನವರಿ 2024 (15:22 IST)
ಬೆಂಗಳೂರು-ರಾಜಧಾನಿಯಲ್ಲಿ ಮೈ ಝುಂ ಎನ್ನುವಂತ ಡೆಡ್ಲಿ ಅಟ್ಯಾಕ್ ಆಗಿದೆ.ಸಲೂನ್ ಶಾಪ್‌ಗೆ ನುಗ್ಗಿ ಯುವಕನಿಗೆ ಚಾಕು ಇರಿಯಲಾಗಿದೆ.ಹಿಗ್ಗಾಮುಗ್ಗ ಹಲ್ಲೆ‌ ನಡೆಸಿ ಚಾಕುವಿನಿಂದ ದುಷ್ಕರ್ಮಿಗಳು ಇರಿದಿದ್ದಾರೆ.ಜೆಜೆ ನಗರದ ಸೆಲೂನ್ ಶಾಪ್‌ನಲ್ಲಿ ಘಟನೆ ನಡೆದಿದೆ.ಶಾಹಿದ್ ಅಹಮ್ಮದ್ ಎಂಬಾತನಿಗೆ ಇದೇ ತಿಂಗಳ 16ರಂದು ರಾತ್ರಿ 9.30ಕ್ಕೆ  ಕೃತ್ಯ ಎಸೆಗಿದ್ದಾರೆ.

ತಬ್ರೇಜ್ ನದೀಂ, ಗುಡ್ಡು, ವಾಹೀಂ, ರಾಹಿಲ್ ರಿಯಾನ್, ರೋಷನ್, ಸಲೀಂ ಎಂಬುವರಿಂದ ಶಾಹಿದ್ ಮೇಲೆ ಹಲ್ಲೆ ಮಾಡಿದ್ದಾರೆ.ಮೊದಲಿಗೆ ಪಾರ್ಕಿಂಗ್ ವಿಚಾರವಾಗಿ  ಕಿರಿಕ್ ನಡೆದಿದೆ.ನಂತರ ಸಲೂನ್ ಶಾಪ್‌ಗೆ ನುಗ್ಗಿ ಚಾಕುವಿನಿಂದ ಇರಿಯಲಾಗಿದೆ.ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಗಾಯಾಳು ಶಾಹಿದ್‌ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ