ಮನೆ ಮನೆಗೆ ನಾಡಧ್ವಜ - ಜೆಡಿಎಸ್ ಅಭಿಯಾನ

ಸೋಮವಾರ, 17 ಅಕ್ಟೋಬರ್ 2022 (16:29 IST)
ಜೆಡಿಎಸ್​​​​​ ವತಿಯಿಂದ​ ಮನೆಮನೆಗೆ ನಾಡಧ್ವಜ ಎಂಬ ಅಭಿಯಾನ ಹಿನ್ನೆಲೆ ಇಂದು ಜೆಡಿಎಸ್ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಜೆಡಿಎಸ್‌ ರಾಜ್ಯಧ್ಯಕ್ಷ CM ಇಬ್ರಾಹಿಂ, HD ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾ ಅಧ್ಯಕ್ಷರು,ಪದಾಧಿಕಾರಿಗಳು ಸೇರಿದಂತೆ ಅನೇಕ ನಾಯಕರು ಭಾಗಿಯಾಗಿದ್ರು. ರಾಜ್ಯದ್ಯಂತ ಮನೆಗಳ ಮೇಲೆ ಕನ್ನಡ ಬಾವುಟ ಹಾರಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮನೆ ಮನೆಗೆ ಬಾವುಟ ನೀಡಲು ಕಾರ್ಯಕರ್ತರಿಗೆ ಸೂಚನೆ ನೀಡಿರುವ ಹೆಚ್ಡಿಕೆ ರಾಷ್ಟ್ರಪ್ರೇಮದ ಜೊತೆಗೆ ರಾಜ್ಯ ಪ್ರೀತಿ ಅನ್ನೋ ಸಂದೇಶ ರವಾನೆಗೆ ಮುಂದಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ