ಮನೆಗಳವು ಮಾಡಿ ಸಿನಿಮಾ ಸ್ಟೋರಿ ಹೇಳಿದಳು..!

geetha

ಮಂಗಳವಾರ, 30 ಜನವರಿ 2024 (17:05 IST)
ಬೆಂಗಳೂರು : ಸದಾಶಿವನಗರದ ಕೀರ್ತಿವರ್ಧನ್‌ ಎಂಬುವವರ ಮನೆಯಲ್ಲಿ ಶಾಂತಾ ಎಂಬ ಮಹಿಳೆ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಳು. ಇತ್ತೀಚಿಗಷ್ಟೇ ಮನೆಯವರು ಕುಟುಂಬಸಮೇತ ವಿದೇಶಕ್ಕೆ ತೆರಳಿದ್ದರು. ಈ ವೇಳೆ ಮನೆಯಲ್ಲಿ 10 ಲಕ್ಷ ರೂ . ಮೌಲ್ಯದ ಚಿನ್ನಾಭರಣಗಳ ಕಳವು ನಡೆದಿತ್ತು. 

ಮೂರು ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ ಮಹಿಳೆಯೇ ಮನೆಗೆ ಕನ್ನ ಹಾಕಿರುವ ಘಟನೆ ಸದಾಶಿವ ನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಳವು ನಡೆದ ಬಳಿಕ ಕಥೆಯೊಂದನ್ನು ಹೇಳಿ ಮನೆಯವರನ್ನು ನಂಬಿಸಿದ್ದ ಮನೆಗೆಲಸದಾಕೆಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆಕೆಯ ವಂಚನೆ ಹೊರಬಿದ್ದಿದೆ. 

ಮನೆಯವರು ಬಂದಾಗ , ನಾನು ಮಲಗಿದ್ದಾಗ ಇಬ್ಬರು ಕಳ್ಳರು ಬಂದು ನನ್ನ ಮೇಲೆ ಹಲ್ಲೆಯೆಸಗಿ ಕಳವು ಮಾಡಿದ್ದಾಗಿ ಕಥೆ ಕಟ್ಟಿದ್ದಳು. ಇದನ್ನು ನಂಬಿದ್ದ ಮಾಲಿಕರು ಮತ್ತು ಪೊಲೀಸರು ಅಪರಿಚಿತ ಕಳ್ಳರ ಮೇಲೆ ದೂರು ದಾಖಲಿಸಿಕೊಂಡಿದ್ದರು. ಆದರೆ ತನಿಖೆಯ ವೇಳೆ ಶಾಂತಾಳೇ ಕಳವು ಮಾಡಿರುವುದು ಧೃಡಪಟ್ಟಿತ್ತು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ