ದಾಳಿ ನಡೆಸಿದ ಅಧಿಕಾರಿಗಳಿಗೆ ನೂರಾರು ಕ್ವಿಂಟಲ್ ಸಿಕ್ಕಿದ್ದೇನು?

ಸೋಮವಾರ, 27 ಏಪ್ರಿಲ್ 2020 (15:35 IST)
ಅಕ್ರಮವಾಗಿ ಸಂಗ್ರಹ ಮಾಡಿದ್ದ ನೂರಾರು ಕ್ವಿಂಟಲ್ ಕಳಪೆ ಬೀಜವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಗುತ್ತಲದ ಕಾಂಚನ ಗಂಗಾ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿದ  ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ ನೇತೃತ್ವದ ತಂಡ ಅಕ್ರಮವಾಗಿ ಸಂಗ್ರಹಿಸಿದ್ದ ಖುಲ್ಲಾ ಮೆಕ್ಕೆಜೋಳ ಬಿತ್ತನೆ ಬೀಜವನ್ನು ವಶಪಡಿಸಿಕೊಂಡಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಂಟಿ ಕೃಷಿ ನಿರ್ದೇಶಕ ಬಿ. ಮಂಜುನಾಥ, ಬೀಜೋಪಚಾರ ಮಾಡಿದ 280 ಕ್ವಿಂಟಲ್ ಕಳಪೆ ಗುಣಮಟ್ಟದ ಮೆಕ್ಕೆಜೋಳದ ಬಿತ್ತನೆ ಬೀಜ, ಬೀಜೋಪಚಾರ ಮಾಡಿದ 89 ಚೀಲ, ಐಪಿಎಲ್ ಪೋಟ್ಯಾಶ್ ಗೊಬ್ಬರ 106 ಚೀಲ, 17:17:17 ಗೊಬ್ಬರ 91 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ