ಮೋದಿಯನ್ನು ಬೈಯ್ಯುವುದು ಎಷ್ಟು ಸರಿ?

ಸೋಮವಾರ, 1 ಮೇ 2023 (19:50 IST)
ಶಾಸಕ ಪ್ರಿಯಾಂಕ್​​ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಲಾಯಕ್ ಎಂದಿದ್ದಾರೆ.. ಅವರ ತಂದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮೋದಿಯವರನ್ನು ವಿಷ ಸರ್ಪ ಎಂದಿದ್ದರು. ಇದು ಎಷ್ಟು ಸರಿ ಎಂದು ಬಿಜೆಪಿ MLC ಚಲವಾದಿ ನಾರಾಯಣ್ ಸ್ವಾಮಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್​​ನವರು ಬೈದಷ್ಟು ಕಮಲ ಅರಳುತ್ತದೆ.. ಕಾರಣ ಕಮಲ ಬೆಳೆಯೋದೆ ಕೆಸರಲ್ಲಿ. ಅವರು ಹತಾಶೆಯಲ್ಲಿದ್ದಾರೆ.. ರಾಜ್ಯದಲ್ಲಿ ಮೋದಿ ಅಲೆ ಎದ್ದಿದೆ.. ಆದ್ರಿಂದ ಮೋದಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ. ಹೀಗಾಗಿ ಕಾಂಗ್ರೆಸ್​​ನವರು ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ