ಸ್ನೇಹಿತನನ್ನು ಕೊಂದು 200 ತುಂಡುಗಳಾಗಿ ಕತ್ತರಿಸಿ ಶೌಚಾಲಯದೊಳಗೆ ಹಾಕಿದಾತ ಆಮೇಲೆ ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ?

ಶನಿವಾರ, 26 ಜನವರಿ 2019 (06:42 IST)
ಮುಂಬೈ : ಸಾಲ ಮರುಪಾವತಿ ಮಾಡದಿದದ್ದಕ್ಕೆ ತನ್ನ ಸ್ನೇಹಿತನನ್ನೇ 200 ತುಂಡುಗಳಾಗಿ ಕತ್ತರಿಸಿ ಕೊಲೆ ಮಾಡಿದ ಭೀಕರ ಘಟನೆ ಮುಂಬೈನಲ್ಲಿ ನಡೆದಿದೆ.


ಪಿಂಟು ಶರ್ಮಾ ಕೊಲೆ ಮಾಡಿದ ಆರೋಪಿ, ಗಣೇಶ್ ಕೊಲೆಯಾದ ವ್ಯಕ್ತಿ. ಪಿಂಟು ಶರ್ಮಾ ತನ್ನ ಸ್ನೇಹಿತ ಗಣೇಶ್‌ ಗೆ ಪ್ರಿಂಟಿಂಗ್‌ ಪ್ರೆಸ್‌ ನಡೆಸಲು 1 ಲಕ್ಷ ರು. ಸಾಲ ನೀಡಿದ್ದ. ಈ ಪೈಕಿ 40000 ರು.ಗಳನ್ನು ಮಾತ್ರವೇ ಗಣೇಶ್‌ ಮರಳಿಸಿದ್ದ. ಉಳಿದ ಹಣ ಪಾವತಿ ಮಾಡದ ಹಿನ್ನಲೆಯಲ್ಲಿ ಇವರಿಬ್ಬರ ನಡುವೆ ಗಲಾಟೆ ನಡೆದು ಆ ವೇಳೆ ಪಿಂಟು ಗಣೇಶ್‌ ನನ್ನು ಕೊಲೆ ಮಾಡಿದ್ದಾನೆ. ಬಳಿಕ ಕೊಲೆ ಮಾಡಿದ ಸಾಕ್ಷಿ ಸಿಗಬಾರದು ಎಂದು ಆತನ ದೇಹವನ್ನು 200 ತುಂಡುಗಳಾಗಿ ಕತ್ತರಿಸಿ, ಅದನ್ನು ಶೌಚಾಲಯದೊಳಗೆ ಹಾಕಿ ಫ್ಲಶ್ ಮಾಡಿದ್ದಾನೆ.


ಆದರೆ ದೇಹದ ಭಾಗಗಳು ಶೌಚಾಲಯದ ಪೈಪ್‌ನಲ್ಲಿ ಸಿಕ್ಕಿಹಾಕಿಕೊಂಡು, ಬ್ಲಾಕ್ ಆದ ಕಾರಣ ಪೈಪ್‌ ಸ್ವಚ್ಛಗೊಳಿಸುವ ವೇಳೆ ಈ ಕೊಲೆ ವಿಚಾರ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಅನುಮಾನಗೊಂಡ ಪೊಲೀಸರು ಪಿಂಟುವನ್ನು ಬಂಧಿಸಿ  ವಿಚಾರಣೆ ನಡೆಸಿದಾಗ ಪಿಂಟು ತಾನು ಕೊಲೆ ಮಾಡಿದ ವಿಚಾರವನ್ನು ಒಪ್ಪಿಕೊಂಡಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ