ಕೃತಜ್ಞತೆ ಇಲ್ಲದವರು ನಾಯಕರಲ್ಲ– ಸಿಎಂ ವಿರುದ್ಧ ಎಚ್.ವಿಶ್ವನಾಥ್ ಕಿಡಿ

ಗುರುವಾರ, 22 ಫೆಬ್ರವರಿ 2018 (18:52 IST)
ಕೃತಜ್ಞತೆ ಗುಣ ಹೊಂದಿರದವರ ಜೀವನ ಜೀವನವೇ ಅಲ್ಲ, ಅಂಥವರು ನಾಯಕರೂ ಅಲ್ಲ ಎಂದು ಜೆಡಿಎಸ್ ಮುಖಂಡ ಎಚ್.ವಿಶ್ವಾನಾಥ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜಕೀಯವಾಗಿ ಬೆಳೆಸಿದ ವ್ಯಕ್ತಿಗಳನ್ನು ದೂರುತ್ತಿರುವವರ ಮನೋಭಾವನೆಗೆ ಸದ್ಯದಲ್ಲೆ ಪ್ರತ್ಯುತ್ತರ ದೊರೆಯಲಿದೆ ಎಂದಿದ್ದಾರೆ.

ಸಿದ್ದರಾಮಯ್ಯರನ್ನು ರಾಜಕೀಯವಾಗಿ ಬೆಳೆಸಿದವರು ದೇವೇಗೌಡ ಅವರೇ ಹೊರತು ರಾಮಕೃಷ್ಣ ಹೆಗಡೆ ಅಲ್ಲ. ಆದರೆ, ದೇವೇಗೌಡರ ಬಗ್ಗೆ ಟೀಕೆ ಮಾಡುವುದು ಸರಿಯಲ್ಲ. ಇದರಿಂದ ನೀವು ಜನನಾಯಕರಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.

ಅಹಿಂದ ವರ್ಗದ ಹೆಸರೇಳಿ ಅಧಿಕಾರಕ್ಕೆ ಬಂದ ನೀವು ಆ ವರ್ಗದ ಆರ್ಥಿಕ ಬಲವರ್ಧನೆಗೆ ಯಾವುದೇ ಯೋಜನೆ ರೂಪಿಸಿಲ್ಲ. ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಹುಸಿಯಾಗಿದೆ. ಅಹಿಂದ ನಾಯಕನೆಂಬ ಪಟ್ಟವನ್ನು ನೀವೇ ಕಟ್ಟಿಕೊಂಡಿದ್ದೀರಿ. ಆದ್ದರಿಂದ ಮುಂದಿನ ದಿನಗಳಲ್ಲಿ ಅಹಿಂದ ವರ್ಗದವರೇ ತಕ್ಕ ಪಾಠ ಕಲಿಸುತ್ತಾರೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ