ಎಲೆಕ್ಷನ್ ಬಳಿಕ ನಡೆಯುತ್ತಿವೆ ಭೀಕರ ಕೊಲೆಗಳು...

ಶುಕ್ರವಾರ, 26 ಏಪ್ರಿಲ್ 2019 (10:25 IST)
ಎಲೆಕ್ಷನ್ ಬಳಿಕ ಬಿಸಿಲುನಾಡಿನಲ್ಲಿ ಹತ್ಯೆ ಪ್ರಕರಣಗಳು ಮುಂದುವರಿದಿವೆ. ಮೊನ್ನೆ ಒಬ್ಬ ಯುವಕನನ್ನು ಕೊಲೆ ಮಾಡಲಾಗಿದ್ದರೆ, ಈಗ ರೌಡಿ ಶೀಟರ್ ಹತ್ಯೆ ನಡೆದಿದೆ.

 ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ರೌಡಿ ಶೀಟರ್ ವೊಬ್ಬನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಕಲಬುರಗಿಯ ಬಬಲಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಆನಂದ ರಾಂಪುರೆ (30) ಹೆಣವಾದ ರೌಡಿ ಶೀಟರ್. ಈತ ಕಾಂತ ಕಾಲೋನಿಯ ನಿವಾಸಿಯಾಗಿದ್ದನು. ಹಳೆ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ರೌಡಿ ಶೀಟರ್ ಆನಂದ ವಿರುದ್ಧ ಹಲವು ಗಂಭೀರ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದವು. ರೌಡಿ ಹತ್ಯೆ ಕುರಿತು ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ