ಎನ್ ಡಿ ತಿವಾರಿ ಪುತ್ರನ ಕೊಲೆ ಪ್ರಕರಣ: ಪತ್ನಿಯೇ ಪತಿಯ ಹತ್ಯೆಗೆ ಸ್ಕೆಚ್ ಹಾಕಿದ್ದು ಹೇಗೆ ಗೊತ್ತಾ?!

ಗುರುವಾರ, 25 ಏಪ್ರಿಲ್ 2019 (08:17 IST)
ನವದೆಹಲಿ: ರಾಜಕಾರಣಿ ಎನ್ ಡಿ ತಿವಾರಿ ಪುತ್ರ ರೋಹಿತ್ ಶೇಖರ್ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದು, ಪತ್ನಿಯೇ ಆರೋಪಿ ಎನ್ನುವುದು ಖಚಿತವಾಗಿದೆ.


ತಾನೇ ಪತಿಯನ್ನು ಕೊಲೆ ಮಾಡಿರುವುದನ್ನು ಪತ್ನಿ ಅಪೂರ್ವ ಒಪ್ಪಿಕೊಂಡಿದ್ದಾಳೆ. ಕುಡಿದ ಮತ್ತಿನಲ್ಲಿದ್ದ ಪತಿ ರೋಹಿತ್ ಜತೆಗೆ ತೀವ್ರ ಕಲಹವಾದ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದಲ್ಲದೆ, ಕೇವಲ ಒಂದೂವರೆ ಗಂಟೆಯಲ್ಲಿ ಸಾಕ್ಷ್ಯ ನಾಶ ಮಾಡಿದ್ದು ಬೆಳಕಿಗೆ ಬಂದಿದೆ.

ದಂಪತಿ ನಡುವಿನ ಸಂಬಂಧ ಸರಿ ಇರಲಿಲ್ಲ. ಇದೇ ಕಾರಣಕ್ಕೆ ಬೇರೆಯಾಗಲು ನಿರ್ಧರಿಸಿದ್ದರು. ಹಾಗಿದ್ದರೂ ಆಸ್ತಿ ವಿಚಾರಕ್ಕೆ ಇಬ್ಬರ ನಡುವೆ ಜಗಳವೇರ್ಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಇದೇ ಕಾರಣಕ್ಕೆ ಅಪೂರ್ವ ಪತಿಯನ್ನೇ ಕೊಲೆ ಮಾಡಿದ್ದಾಳೆ ಎಂದು ರೋಹಿತ್ ಕುಟುಂಬದವರು ಆರೋಪಿಸಿದ್ದರು.

ಏಪ್ರಿಲ್ 15 ರಂದು ನಡೆದ ಈ ಘಟನೆಯನ್ನು ಇದೀಗ ಸ್ವತಃ ಅಪೂರ್ವ ಒಪ್ಪಿಕೊಂಡಿದ್ದು, ಮಹಿಳಾ ಸಂಬಂಧಿಯೊಬ್ಬಳೊಂದಿಗೆ ವಿಪರೀತ ಮದ್ಯಪಾನ ಮಾಡಿದ್ದಕ್ಕೆ ಜಗಳವಾಡಿದ್ದಾಗಿ ಹೇಳಿಕೊಂಡಿದ್ದಾಳೆ. ಬಳಿಕ ಪತಿಯ ರೂಂಗೆ ತೆರಳಿ ಆತ ತನ್ನನ್ನು ತಾನು ನಿಯಂತ್ರಿಸಲಾಗದ ಸ್ಥಿತಿಯಲ್ಲಿದ್ದಾಗ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ, ಸಂಪೂರ್ಣವಾಗಿ ಸಾಕ್ಷ್ಯ ನಾಶ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ಇದೀಗ ಆರೋಪಿ ಅಪೂರ್ವರನ್ನು ಪೊಲೀಸರು ಬಂಧಿಸಿದ್ದು, ಎರಡು ದಿನಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ       

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ