ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದ್ದಂತೆ ಹಿಂಡಲಗಾ ಜೈಲು

ಶುಕ್ರವಾರ, 1 ಅಕ್ಟೋಬರ್ 2021 (20:43 IST)
ವಿಕೃತ ಕಾಮಿ ಉಮೇಶ ರೆಡ್ಡಿಗೆ ಗಲ್ಲು ಶಿಕ್ಷೆ ಖಾಯಂಗೊಳಿಸಿದ್ದಂತೆ ಹಿಂಡಲಗಾ ಜೈಲಿನಲ್ಲಿ ಕಾಮಿ ಉಮೇಶ ರೆಡ್ಡಿ ಕಿರಿಕ್ ಮಾಡಿದ್ದಾನೆ. ಹಿಂಡಲಗಾ ಜೈಲಿನ ಅಂದೇರಿ ವಿಭಾಗದಲ್ಲಿರುವ ವಿಕೃತ ಕಾಮಿ ಉಮೇಶ ರೆಡ್ಡಿ ರಾತ್ರಿ ಊಟ ನೀಡಲು ಬಂದ ಜೈಲು ಸಿಬ್ಬಂದಿ ಜೊತೆ ಉದ್ಘಟತನ ತೋರಿದ್ದಾನೆ. ಊಟ ನಿರಾಕರಿಸಿ, ಜೈಲು ಸಿಬ್ಬಂದಿಗೆ ಆವಾಜ್ ಹಾಕುತ್ತಿದ್ದಾನೆ ಎಂದು ಹೇಳಲಾಗಿದೆ. 2014ರಲ್ಲಿ ಕಾಮಿ ಉಮೇಶ ರೆಡ್ಡಿ ಕ್ಷಮಾಧಾನ ಅರ್ಜಿಯನ್ನಿ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದ್ದರು. ಗಲ್ಲು ಶಿಕ್ಷೆಯನ್ನ ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ಎಂದು ಹೈಕೋರ್ಟ್ ಮೊರೆ ಹೋಗಿದ್ದ ಉಮೇಶ ರೆಡ್ಡಿಗೆ ಗಲ್ಲು ಖಾಯಂಗೊಳಿಸಿ ಹೈಕೋರ್ಟ್ ಮತ್ತೆ ಆದೇಶ ನೀಡಿದೆ. ಸದ್ಯ 6 ವಾರಗಳ ಕಾಲ ವಿಕೃತ ಕಾಮಿಯನ್ನ ಗಲ್ಲಿಗೇರಿಸದಂತೆ ಆದೇಶಿಸಿದ್ದು, ಇದೀಗ ಮತ್ತೆ ಸುಪ್ರೀಂಕೋರ್ಟ್‌ ಮೊರೆ ಹೋಗುವ ಸಾಧ್ಯತೆ ದಟ್ಟವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ