ಹೆಂಡತಿಯ ಶೀಲ ಶಂಕಿಸಿದ್ದ ಕೊಲೆಗಡುಕ ಪತಿ ಚಲಿಸುತ್ತಿದ್ದ ರೈಲಿಗೆ ಬಿದ್ದ

ಶನಿವಾರ, 4 ಜನವರಿ 2020 (17:48 IST)
ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಪತಿಯೊಬ್ಬ ಚಲಿಸುತ್ತಿದ್ದ ರೈಲಿಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಲಬುರಗಿಯ ಚಿಂಚೋಳಿ ತಾಲೂಕಿನ ಭೈರಂಪಲ್ಲಿಯ ಸಂಜು ನಾಯಕ್ ಚಲಿಸುತ್ತಿದ್ದ ರೈಲಿಗೆ ತಾಂಡೂರ ಹತ್ತಿರ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪತ್ನಿ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಮಕ್ಕಳಾದ ರೋಹಿತಾ (4), ಪವಿತಾ (2) ಅವರಿಗೆ ಹಣ್ಣಿನ ರಸದಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದನು.

ಮಕ್ಕಳನ್ನು ಕೊಂದ ಬಳಿಕ ಸಂಜು ತಾನೂ ಆತ್ಮಹತ್ಯೆ ಮಾಡಿಕೊಳ್ಳೋಕೆ ಅಂತ ಹೋಗಿ, ರೈಲಿಗೆ ತಲೆಕೊಟ್ಟಿದ್ದಾನೆ ಎನ್ನಲಾಗಿದೆ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ