ಕೆಪಿಸಿಸಿ ಕಚೇರಿ ಮುಂದೆ ಹೈಡ್ರಾಮಾ

ಸೋಮವಾರ, 3 ಏಪ್ರಿಲ್ 2023 (14:21 IST)
ತರೀಕೆರೆ ಕೈ ಟಿಕೆಟ್ ಗೆ ಭಾರೀ ಪೈಪೋಟಿ ನಡೆದಿದ್ದು,ಕೆಪಿಸಿಸಿ ಮುಂಭಾಗ ಮಡಿವಾಳ ಸಮುದಾಯದವರು ಧರಣಿ ಮಾಡಿ ಹೆಚ್ ಎಂ ಗೋಪಿಕೃಷ್ಣಗೆ ಟಿಕೆಟ್ ನೀಡುವಂತೆ ಆಗ್ರಹಿಸಿದ್ದಾರೆ.ಮತ್ತೊಬ್ಬ ಟಿಕೆಟ್ ಆಕಾಂಕ್ಷಿಯಾಗಿರುವ ಶ್ರೀನಿವಾಸ್ ಮಡಿವಾಳ ಸಮಾಜದ ಹೆಚ್ ಎಂ ಗೋಪಿಕೃಷ್ಣಗೆ ಟಿಕೆಟ್ ಕೊಡವಂತೆ ಡಿಮ್ಯಾಂಡ್ ಮಾಡಿದ್ದಾರೆ. ಅಲ್ಲದೇ ಕೆಪಿಸಿಸಿ ಕಛೇರಿ ಮುಂದೆ ದೊಡ್ಡ ಹೈಡ್ರಾಮಾ ನಡೆದಿದ್ದು,ಟಿಕೆಟ್ ಕೊಡದೇ ಇದ್ದರೆ ವಿಷ ಕುಡಿಯುತ್ತೇವೆ ಎಂದು ವಿಷದ ಬಾಟಲ್ ಹಿಡಿದು ಕೈ ಟಿಕೆಟ್ ಅಕಾಂಕ್ಷಿ ಬೆಂಬಲಿಗರಾದ ಗೋಪಿಕೃಷ್ಣ ಬೆದರಿಸಿದ್ದಾರೆ.ಪೊಲೀಸರು ವಿಷದ ಬಾಟಲ್ ನ್ನ ಕಸಿದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ