ಅಂಬರೀಶ್ ಗೆ ಪುನರ್ಜನ್ಮ ಕೊಟ್ಟಿದ್ದೇ ನಾನು ಎಂದ ಸಚಿವ

ಶುಕ್ರವಾರ, 29 ಮಾರ್ಚ್ 2019 (14:01 IST)
ಮಂಡ್ಯದಲ್ಲಿ ಚುನಾವಣೆ ಕಾವು ಜೋರಾಗಿರುವಂತೆ ಮುಖಂಡರ ಹೇಳಿಕೆಗಳೂ ಗದ್ದಲ ಮಾಡುತ್ತಿವೆ.

'ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನು'. ಅಂಬಿ ಕುಟುಂಬಕ್ಕೆ ನಾನೇನು ಮಾಡಿದ್ದೇನೆ ಅನ್ನೋದನ್ನ ಕೇಳಲಿ. ಹೀಗಂತ ಸಚಿವರೊಬ್ಬರು ಸವಾಲು ಹಾಕಿದ್ದಾರೆ.

ಸುಮಲತಾಗೆ ಸಚಿವ ಪುಟ್ಟರಾಜು ಸವಾಲು ಹಾಕಿದ್ದಾರೆ. ಅಂಬಿ ಸಮಾಧಿ ಮುಂದೆ ನಿಂತು ಕೇಳಲಿ. ನನ್ನ ಆತ್ಮಾಭಿಮಾನದ ಸುಮಲತಾ ಪ್ರಶ್ನೆ ಮಾಡೋದು ಬೇಡ. ರಾಮನಗರದಲ್ಲಿ ಸೋತ ಬಳಿಕ ಮಂಡ್ಯಕ್ಕೆ ಕರೆತಂದಿದ್ದು ನಾನು. ಅಂಬರೀಶ್ ಅವರನ್ನ ಮಂಡ್ಯಕ್ಕೆ ಕರೆತಂದಿದ್ದು ನಾನೇ ಎಂದರು.

ಅವರ ರಾಜಕೀಯ ಏಳ್ಗೆಗಾಗಿ ಶ್ರಮಿಸಿದವನು ನಾನು ಎಂದ ಅವರು, ಮಂಡ್ಯದಲ್ಲಿ ಅಂಬಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದು ನಾನೇ ಅಂತ ಮತ್ತೆ ಮತ್ತೆ ಹೇಳಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ