‘ಸಿದ್ದರಾಮಯ್ಯರ ಸರ್ಟಿಫಿಕೇಟ್​​ ನನಗೆ ಬೇಕಿಲ್ಲ’

ಭಾನುವಾರ, 10 ಏಪ್ರಿಲ್ 2022 (18:27 IST)
ಗೃಹ ಸಚಿವ ಅಸಮರ್ಥ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ಕೊಟ್ಟಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿದ್ದರಾಮಯ್ಯ ಕೊಡೋ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್​​ ಸರ್ಕಾರ ಇದ್ದಾಗ ಎಷ್ಟು ಹಿಂದೂ ಕಾರ್ಯಕರ್ತರ ಹತ್ಯೆಗಳಾಗಿವೆ ಎಂಬುದು ನಮಗೆ ಗೊತ್ತಿದೆ. ಕಾಂಗ್ರೆಸ್​​ ಬಣ್ಣವನ್ನ ವಿಧಾನಸಭೆಯಲ್ಲಿ ನಾನು ಬಯಲು ಮಾಡಿದ್ದೇನೆ.ಇಷ್ಟಾದರೂ ನನ್ನನ್ನ ಅಸಮರ್ಥ ಅಂತಾ ಹೇಳೋದು ಸರಿಯಲ್ಲ. ಒಬ್ಬ ಗೃಹ ಸಚಿವನಾಗಿ ನಾನು ಸಮರ್ಥವಾಗಿ ಇಲಾಖೆ ನಿಭಾಯಿಸ್ತಿದ್ದೇನೆ.ರಾಜ್ಯದಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಅಂತ ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ