ಮಂಗಳೂರು ಜಿಲ್ಲೆಯನ್ನು ನರಕ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿಕೆ ನೀಡಿರುವ ಕುರಿತು ನನ್ನ ಗಮನಕ್ಕೆ ಬಂದಿಲ್ಲ. ನನ್ನ ಪಾಲಿಗೆ ಮಂಗಳೂರು ನಗರ ಸ್ವರ್ಗವಿದ್ದಂತೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ರಮಾನಾಥ ರೈ, ಮನುಷ್ಯನನ್ನು ಪ್ರೀತಿಸದವರು ದೇವರನ್ನು ಸಹ ಪ್ರೀತಿಸಲು ಸಾಧ್ಯವಿಲ್ಲ. ಗೋ ರಕ್ಷಣೆ ಹೆಸರಿನಲ್ಲಿ ಅಮಾಯಕರನ್ನು ಹತ್ಯೆ ಮಾಡಲಾಗುತ್ತಿದೆ. ಇದು ಮಂಗಳೂರಿನ ಜನತೆಯಲ್ಲಿ ಆತಂಕ ಮೂಡಿಸಿದೆ ಎಂದು ಹೇಳಿದರು.
ಪಾಕಿಸ್ತಾನ ನರಕವಿದ್ದಂತೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವ ಮನೋಹರ್ ಪರಿಕರ್ ಅವರಿಗೆ ತಿರುಗೇಟು ನೀಡುವ ಬರದಲ್ಲಿ ನಟಿ ರಮ್ಯಾ ಪಾಕಿಸ್ತಾನದ ಪರವಾಗಿ ಹೇಳಿಕೆ ನೀಡಿದ್ದು, ಹಾಗೂ ಮಂಗಳೂರು ನಗರವನ್ನು ನರಕ ಎಂದು ಹೇಳುವ ಮೂಲಕ ಬಾರಿ ವಿವಾದವನ್ನು ಸೃಷ್ಟಿಸಿದ್ದರು.