ಸಿಎಂಗೆ ಕಾಮನ್‌ಸೆನ್ಸ್ ಇದೆಯೋ ಇಲ್ಲವೋ ಗೊತ್ತಿಲ್ಲ?: ಎಚ್.ವಿಶ್ವನಾಥ್

ಭಾನುವಾರ, 21 ಮೇ 2017 (12:50 IST)
ಕಾಂಗ್ರೆಸ್ ಪಕ್ಷ ಸೇರುವುದರಲ್ಲಿ ರಾಜ್ಯನಾಯಕರ ಪಾತ್ರವಿಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಂಸದ ಎಚ್.ವಿಶ್ವನಾಥ್, ಕೆಪಿಸಿಸಿ ಸಮ್ಮತಿಯಿಲ್ಲದೇ ಪಕ್ಷ ಸೇರಲು ಸಾಧ್ಯವಿಲ್ಲ ಎನ್ನುವ ಕಾಮನ್‌ಸೆನ್ಸ್ ಸಿದ್ದರಾಮಯ್ಯನವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ನೀವು ಸೋನಿಯಾ ಗಾಂಧಿಯವರನ್ನು ಸಂಪರ್ಕಿಸಿರಬಹುದು. ಅಹ್ಮದ್ ಪಟೇಲ್‌ರನ್ನು ಸಂಪರ್ಕಿಸಿರಬಹುದು. ಆದರೆ. ಸಾಮಾನ್ಯ ಪ್ರಕ್ರಿಯೆಯಂತೆ ಕೆಪಿಸಿಸಿ ಸಮ್ಮತಿಯಿಲ್ಲದೇ ಪಕ್ಷ ಸೇರ್ಪಡೆ ಅಸಾಧ್ಯ ಎನ್ನುವುದು ನಿಮಗೆ ಗೊತ್ತಿಲ್ಲವೇ ಎಂದು ಲೇವಡಿ ಮಾಡಿದ್ದಾರೆ.
 
ಅಂದಿನ ಕೆಪಿಸಿಸಿ ಅದ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಇತರ ನಾಯಕರಿಗೆ ಅಪಮಾನ ಮಾಡಿದ್ದಾರೆ. ಅವರ ಮಾತು ಕೇಳಿದ್ರೆ ಸುಳ್ಳುಗಾರ ಎನ್ನುವುದು ತಿಳಿಯುತ್ತದೆ. 2005 ರಲ್ಲಿ ಮತ್ತೆ ನಾವೆಲ್ಲರು ಒಗ್ಗಟ್ಟಿನಿಂದ ಪಕ್ಷದಲ್ಲಿ ಮುಂದುವರಿದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಮಾಜಿ ಸಂಸದ ಎಚ್.ವಿಶ್ವನಾಥ್ ವಾಗ್ದಾಳಿ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ