ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ಪುನಾರಚನೆಯಲ್ಲಿ ಕೆಲವರನ್ನು ಕೈಬಿಡಲಾಗುವುದು. ಕೆಲವರ ಖಾತೆ ಬದಲಾವಣೆ ಮಾಡಲಾಗುವುದು ಎನ್ನುವ ಉಹಾಪೋಹದ ವರದಿಗಳು ಹರಡಿವೆ. ಆದರೆ, ಸತ್ಯ ಸಂಗತಿ ಸಿಎಂ ಸಿದ್ದರಾಮಯ್ಯ ನಗರಕ್ಕೆ ವಾಪಸ್ ಆದ ನಂತರ ತಿಳಿಯಲಿದೆ ಎಂದರು.
ಮಂತ್ರಿ ಪರಿಷತ್ ಸಭೆ ಅಂದ್ರೆನೆ ಸಿಕ್ರೇಟ್, ಅದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಆದರೆ, ಪರೋಕ್ಷವಾಗಿ ತಮ್ಮನ್ನು ಸಚಿವ ಸ್ಥಾನದಿಂದ ಕೈಬಿಡಲಾಗುತ್ತದೆ ಎನ್ನುವ ಮಾಹಿತಿ ನೀಡಿದರು. ಸಚಿವರನ್ನಾಗಿ ಮಾಡಿದವರು ಆವರೇ, ಸಚಿವ ಸ್ಥಾನದಿಂದ ಕೈಬಿಡುವವರು ಅವರೇ. ಸಂಪುಟದಿಂದ ಕೈಬಿಟ್ಟರೂ, ಬಿಡದಿದ್ದರೂ ಸಂತೋಷ ಎಂದು ವಸತಿ ಖಾತೆ ಸಚಿವ ಅಂಬರೀಶ್ ತಿಳಿಸಿದ್ದಾರೆ.