ರಾಹುಲ್ ಗಾಂಧಿಯನ್ನ ಸ್ಪೀಕರ್ ಅನರ್ಹಗೊಳಿಸಿದ್ದನ್ನ ನಾನು ಸ್ವಾಗತ ಮಾಡ್ತೀನಿ

ಶುಕ್ರವಾರ, 24 ಮಾರ್ಚ್ 2023 (20:30 IST)
ರಾಹುಲ್ ಗಾಂಧಿ ಅನರ್ಹ ವಿಚಾರವಾಗಿ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು,ರಾಹುಲ್ ಗಾಂಧಿಯನ್ನ ಸ್ಪೀಕರ್ ಅನರ್ಹಗೊಳಿಸಿದ್ದನ್ನ ನಾನು ಸ್ವಾಗತ ಮಾಡ್ತೀನಿ.ಈ ರೀತಿ ರಾಜಕಾರಣಿಯೊಬ್ಬರು ಮಾತನಾಡೋದು ಸಮಾಜಕ್ಕೆ ಒಳ್ಳೆಯದ್ ಅಲ್ಲ.ನಾಲಗೆ ಹರಿಬಿಟ್ಟು ಮಾತನಾಡೋರಿಕೆ ಕೋರ್ಟ್ ಎಚ್ಚರಿಕೆ ಗಂಟೆ ಕೊಟ್ಟಿದೆ.ಹಿಂದೆ ಈದಕ್ಕೆ ಸಂಬಂಧಿಸಿದ ಬಿಲ್ ತಂದಾಗ ರಾಹುಲ್ ಗಾಂಧಿ ವಿರೋಧಿಸಿದ್ರು.ಬಹುಶ ಅವರಿಗೆ ಈ ರೀತಿ ಆಗಲಿದೆ ಅನ್ನೋ ದುರಾದೃಷ್ಟಿ ಇತ್ತೇನೋ ಎಂದು ಲೇವಡಿ ಮಾಡಿದ್ದು,ಇನ್ಮೇಲಾದ್ರು ಲಂಡನ್ ಅಲ್ಲಿ ಇಲ್ಲಿ ಸುತ್ತಾಡೋದು ಬಿಟ್ಟು ಎಲ್ಲಾಕಡೆ ಪ್ರಚಾರ ಮಾಡ್ಲಿ.ನಾವು ಅವರಿಗೆ ದೊಡ್ಡ ಹಾರಾ ಹಾಕಿ ಸನ್ಮಾನಿಸುತ್ತೇವೆ ಎಂದು ಸಚಿವ ಅಶೋಕ್ ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ