ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ-ನಟ ಪ್ರಕಾಶ್ ರೈ

ಭಾನುವಾರ, 25 ಫೆಬ್ರವರಿ 2018 (07:15 IST)
ಬೆಂಗಳೂರು : ನಾನು ಯಾವ ವೇದಿಕೆಗೆ ಹೋದರೂ ನನಗೆ ರಾಜಕೀಯ ಬಣ್ಣ ಬಳೆಯುತ್ತಿದ್ದಾರೆ.  ಆದರೆ ನಾನು ಯಾವುದೇ ಪಕ್ಷದವನಲ್ಲ ನಾನೊಬ್ಬ ಕಲಾವಿದನಷ್ಟೇ ಎಂದು ಚಿಕ್ಕಬಳ್ಳಾಪುರದ ಕಾರ್ಯಕ್ರಮವೊಂದರಲ್ಲಿ ನಟ ಪ್ರಕಾಶ್ ರೈ ಹೇಳಿದ್ದಾರೆ. 


‘ಸರ್ವಜನಾಂಗದ ಶಾಂತಿಯ ತೋಟವೆನಿಸಿರುವ ಕರ್ನಾಟಕದಲ್ಲಿ ಕೆಲವರು ಕೋಮು ಬೀಜಗಳನ್ನು ಬಿತ್ತುತಿದ್ದಾರೆ. ಇಂತವರ ಬಗ್ಗೆ ನೀವು ಎಚ್ಚರದಿಂದ ಇರಬೇಕು  ಇವರನ್ನು ಪ್ರಶ್ನಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ಕೋಮು ಬೀಜಗಳನ್ನು ಬಿತ್ತುವವರನ್ನು ಪ್ರಶ್ನಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ.  ಹೀಗಾಗಿ ನನ್ನನ್ನು ಯಾವುದೋ ಒಂದು ಪಕ್ಷದ ಮೂಲಕ ಗುರುತಿಸುವ ಕೆಲಸ ನಡೆಯುತ್ತಿದೆ.  ಜಾತಿ, ಧರ್ಮಗಳ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಟಿಸಿ ಯುವಕರನ್ನು ಜೈಲಿಗೆ ಕಳುಹಿಸಿ ಅವರು ನೆಮ್ಮದಿಯಾಗಿರುತ್ತಾರೆ.  ಆದರೆ ಈ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನಮ್ಮ ಹೆಂಡತಿ ಮಕ್ಕಳು ಬಸ್’ನಲ್ಲಿ ಓಡಾಡುವಾಗ ಯಾರು ಕಲ್ಲು ತೂರದ ರೀತಿ ಸಮಾಜವನ್ನು ಶಾಂತಿಯುತವಾಗಿ ಕಾಪಾಡಬೇಕಿದೆ.  ಇದನ್ನೇ ನಾನು ಮಾಡಲು ಹೊರಟಿದ್ದೇನೆ ‘ ಎಂದು ನಟ ಪ್ರಕಾಶ್ ರೈ ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ