ಉಗ್ರರ ಬಾಡಿ ನೋಡೋ ಆಸೆ ಇದ್ದರೆ ಪಾಕ್ ಗೆ ಹೋಗಲಿ- ರಾಘವೇಂದ್ರ ಹಿಟ್ನಾಳ್‌ ಗೆ ಟಾಂಗ್ ನೀಡಿದ ಬಿಜೆಪಿ ಸಂಸದ

ಸೋಮವಾರ, 4 ಮಾರ್ಚ್ 2019 (08:46 IST)
ಗಂಗಾವತಿ : ಬಿಜೆಪಿ ಸಂಸದ ಕರಡಿ ಸಂಗಣ್ಣ ಅವರು ವಾಯುಸೇನೆ ನಡೆಸಿದ ಏರ್ ಸ್ಟ್ರೈಕ್ ಬಗ್ಗೆ ಸಾಕ್ಷಿ ಕೇಳಿದವರಿಗೆ ಸರಿಯಾದ ಟಾಂಗ್ ನೀಡಿದ್ದಾರೆ.


ಕಾಂಗ್ರೆಸ್ ಶಾಸಕರು ರಾಘವೇಂದ್ರ ಹಿಟ್ನಾಳ್, ಏರ್ ಸ್ಟ್ರೈಕ್ ದಾಳಿಯಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಹೇಳುತ್ತಿದೆ. ಹಾಗಾದರೆ ಶವಗಳನ್ನು ತೋರಿಸಿ ಸಾಕ್ಷಿ ನೀಡಿ ಎಂದು ಹೇಳಿದ್ದರು. ಈ ವಿಚಾರಕ್ಕೆ ಟಾಂಗ್ ನೀಡಿದ ಸಂಸದ ಕರಡಿ ಸಂಗಣ್ಣ ಅವರು, ನಮ್ಮ ಸೈನಿಕರ ಮೇಲೆ ನಂಬಿಕೆ ಇಲ್ಲಾದವರು ಪಾಕಿಸ್ತಾನಕ್ಕೆ ಹೋಗಿ ನೋಡಿಕೊಂಡು ಬರಲಿ ಎಂದು ತಿರುಗೇಟು ನೀಡಿದ್ದಾರೆ.


ದೇಶದ ಬಗ್ಗೆ ಅಭಿಮಾನವಿಲ್ಲದ ಹಿಟ್ನಾಳ್, ಅಭಿಮಾನ ಶೂನ್ಯ ನಾಯಕರು ಎಂದು ಕರಿಯಬೇಕು. ಪಾಕಿಸ್ತಾನದ ಪ್ರತ್ಯಕ್ಷದರ್ಶಿಗಳೆ ಉಗ್ರರ ಡೆಡ್ ಬಾಡಿ ನೋಡಿದ್ದೇವೆ ಎಂದು ಹೇಳಿದ್ದಾರೆ. ಉಗ್ರರ ಬಾಡಿ ನೋಡೋ ಆಸೆ ಇದ್ದರೆ ಅವರು ಪಾಕ್ ಗೆ ಹೋಗಲಿ. ರಾಘವೇಂದ್ರ ಹಿಟ್ನಾಳ್‌ ಅವರು ಇಲ್ಲಿ ಇರಲು ಅರ್ಹರಲ್ಲ, ಪಾಕಿಸ್ತಾನದಲ್ಲೇ ಇರಲಿ ಎಂದು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ