ಫುಟ್ಬಾಲ್ ಆಡಿದ್ರೆ ರೆಡ್ಡಿ ಬಳ್ಳಾರಿಗೆ ಹೋಗಿ ಬೀಳ್ತಾರೆ

ಭಾನುವಾರ, 9 ಏಪ್ರಿಲ್ 2023 (15:01 IST)
ಗಂಗಾವತಿ ಜನ ಇಲ್ಲಿ ಫುಟ್ಬಾಲ್ ಆಡಿದ್ರೆ ಸೀದಾ ಬಳ್ಳಾರಿಗೆ ಹೋಗಿ ಬೀಳ್ತಾರೆ ಎಂದು ಕೊಪ್ಪಳದ ಗಂಗಾವತಿಯಲ್ಲಿ ಜನಾರ್ದನ ರೆಡ್ಡಿ ವಿರುದ್ಧ ಇಕ್ಬಾಲ್‌ ಅನ್ಸಾರಿ ವ್ಯಂಗ್ಯವಾಡಿದ್ದಾರೆ.. ಇಕ್ಬಾಲ್‌ ಅನ್ಸಾರಿ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು, ಜನಾರ್ದನರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.. ಬಳ್ಳಾರಿಯಲ್ಲಿ ಏನು ಮಾಡಲಾರದೇ ಅವರು ಇಲ್ಲಿಗೆ ಬಂದಿದ್ದಾರೆ.. ಇಲ್ಲೇನು ಕಡಿದು ಕಟ್ಟೆ ಹಾಕ್ತರೋ.. ಚುನಾವಣೆ ಮುಗಿದ ನಂತರ ಸಂಜೆನೇ ಅವರು ಹೊರಟು ಹೋಗ್ತಾರೆ.. ಅದೇನ್ ಕಡಿದು ಕಟ್ಟೆ ಹಾಕ್ತಾರೋ ಎಂದು ಇಕ್ಬಾಲ್ ಅನ್ಸಾರಿ ಟೀಕಿಸಿದ್ದಾರೆ.. ನೀತಿ ಸಂಹಿತೆ ಇರುವುದರಿಂದ ಉಪವಾಸ ಸಭೆ ಮಾಡಬೇಕಾಗಿದೆ.. ಎಲೆಕ್ಷನ್‌ ಆದ್ಮೇಲೆ 100 ಎಕರೆ ಹೊಲದಲ್ಲಿ ಬಿರಿಯಾನಿ ತಿನ್ನೋಣ ಎಂದು ಅನ್ಸಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ