ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ತಲೆ ಕತ್ತರಿಸಿ ಇಡ್ತಿನಿ: ಜಮೀರ್

ಶನಿವಾರ, 22 ಜುಲೈ 2017 (13:08 IST)
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಜೆಡಿಎಸ್ ಗೆದ್ರೆ ತಲೆ ಕತ್ತರಿಸಿಡ್ತಿನಿ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಸವಾಲ್ ಹಾಕಿದ್ದಾರೆ.
 
ಕ್ಷೇತ್ರದ ಜನ ನನ್ನ ಇಷ್ಟಪಟ್ಟಿದ್ದಾರೆಯೇ ಹೊರತು ದೇವೇಗೌಡ್ರನ್ನಲ್ಲ. ನನ್ನನ್ನು ಮಗನಂತೆ ಭಾವಿಸಿದ್ದಾರೆ. ನನ್ನ ಮುಖ ನೋಡಿ ಜೆಡಿಎಸ್‌ಗೆ ಮತ ಹಾಕ್ತಾರೆ ಎಂದು ತಿರುಗೇಟು ನೀಡಿದ್ದಾರೆ.
 
ದೇವೇಗೌಡರಿಗೆ ಅಲ್ಪಸಂಖ್ಯಾತರಿಗೆ ಕಾಳಜಿಯಿಲ್ಲ. ನಾನು ಯಾವತ್ತೂ ಕೀಳು ಮಟ್ಟದ ರಾಜಕಾರಣ ಮಾಡುವುದಿಲ್ಲ ಎಂದು ಗುಡುಗಿದರು. 
 
ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯೆ ನೀಡುವಷ್ಟು ದೊಡ್ಡವ ನಾನಲ್ಲ. ಹಿಂದೆ ಅವರು ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಲು ತುಂಬಾ ಶ್ರಮಿಸಿದ್ದರು ಎನ್ನುವುದನ್ನು ಮರೆಯಲಾರೆ ಎಂದು ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.   

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ