ಮಹಾರಾಷ್ಟ್ರ ಸರಕಾರದಿಂದ ಹೆಚ್ಚಿದ ಕಿತಾಪತಿ - ಸಂಸದರು ಕೆಂಡಾಮಂಡಲ

ಮಂಗಳವಾರ, 31 ಡಿಸೆಂಬರ್ 2019 (16:30 IST)

ಮಹಾರಾಷ್ಟ್ರ ಸರಕಾರ ಕಿತಾಪತಿ ಮುಂದುವರಿಸಿರೋದಕ್ಕೆ ರಾಜ್ಯದ ಜನಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
 

ಮಹಾರಾಷ್ಟ್ರ ಸರಕಾರ ರಾಜ್ಯದ ಗಡಿಭಾಗದಲ್ಲಿ ವಿನಾಕಾರಣ ಪುಂಡಾಟಿಕೆ ಮುಂದುವರಿಸುತ್ತಿದೆ. ಗಡಿಯಲ್ಲಿ ಕಿತಾಪಡಿ ನಡೆಸುತ್ತಾ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ.

ಹೀಗಂತ ಸಂಸದ ಬಿ.ಎನ್.ಬಚ್ಚೇಗೌಡ ಟೀಕೆ ಮಾಡಿದ್ದಾರೆ. ಮಹಾಜನ್ ವರದಿಯಲ್ಲಿ ಗಡಿ ಭಾಗದ ಕುರಿತು ಸ್ಪಷ್ಟವಾಗಿ ಹೇಳಲಾಗಿದೆ. ಈ ನಡುವೆ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದೆ. ಆದರೂ ಮಹಾರಾಷ್ಟ್ರ ಸರಕಾರ ಶಾಂತಿಗೆ ಭಂಗ ತರೋ ಕೆಲಸ ಮಾಡುತ್ತಿದೆ ಅಂತ ಕಿಡಿಕಾರಿದ್ರು.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ