ಸಚಿವರು ತಿಂದ ಉಪ್ಪಿಟ್ಟಿನಲ್ಲಿ ವಿಷ ಬೆರೆಸಲಾಗಿತ್ತಾ?

ಸೋಮವಾರ, 4 ಫೆಬ್ರವರಿ 2019 (14:17 IST)
ರಾಜ್ಯದ ಸಚಿವ ಹಾಗೂ ಸಚಿವರ ಗನ್ ಮ್ಯಾನ್ ಮತ್ತು ಆಪ್ತ ಕಾರ್ಯದರ್ಶಿ ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಅವರು ಸೇವಿಸಿದ ಆಹಾರದಲ್ಲಿ ವಿಷ ಬೆರೆತಿರುವ ಶಂಕೆ ವ್ಯಕ್ತವಾಗಿದೆ.

ಸಚಿವ ಸಿ.ಎಸ್.ಶಿವಳ್ಳಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಸಿ.ಎಸ್. ಶಿವಳ್ಳಿ ಪೌರಾಡಳಿತ ಸಚಿವರಾಗಿದ್ದು ಅವರನ್ನು ತಡ ರಾತ್ರಿ ಹುಬ್ಬಳ್ಳಿ ಕಿಮ್ಸಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಕಿಮ್ಸ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಶಿವಳ್ಳಿ ಪಡೆದುಕೊಳ್ಳುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಕರಡಿಕೊಪ್ಪ ಗ್ರಾಮದ ಕಾಯಕ್ರಮ ಮುಗಿಸಿ ವಾಪಸ್ಸು ಬರುವಾಗ ವಾಂತಿಯಾಗಿದೆ. ಕಾರ್ಯಕ್ರಮದ ನಂತರ ಉಪ್ಪಿಟ್ಟು ಸೇವಿಸಿದ್ದರು ಸಚಿವರು. ಹೀಗಾಗಿ ಉಪ್ಪಿಟ್ಟು ಸೇವಿಸಿದ್ದರಿಂದಲೇ ವಾಂತಿ ಆರಂಭಗೊಂಡಿದೆ. ಸಚಿವರ ಗನ್ ಮ್ಯಾನ್, ಆಪ್ತ ಕಾರ್ಯದರ್ಶಿ ಸೇರಿದಂತೆ ನಾಲ್ಕು ಜನರಿಗೆ ವಾಂತಿಯಾಗಿದೆ.

ಉಪ್ಪಿಟ್ಟಿನಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ. ಆದರೆ ಯಾವುದೇ ವಿಚಾರವನ್ನು ಆಸ್ಪತ್ರೆಯ ವ್ಯೆದ್ಯರು ಈವರೆಗೂ ಸ್ಪಷ್ಟಪಡಿಸಿಲ್ಲ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ