ಲಾಕ್ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಉದ್ದೇಶ?

ಬುಧವಾರ, 5 ಜನವರಿ 2022 (13:03 IST)
ಬೆಳಗಾವಿ : ಈಗ 9ನೇ ತರಗತಿವರೆಗೆ ಶಾಲೆಗಳನ್ನು ಬಂದ್ ಮಾಡಿದ್ದೇವೆ.

ಪರಿಸ್ಥಿತಿ ನೋಡಿಕೊಂಡು ಮುಂದೆ ಏನು ಕ್ರಮ ವಹಿಸಬೇಕು, ಅದನ್ನ ಸರ್ಕಾರ ವಹಿಸುತ್ತೆ ಎಂದು ಸಚಿವ ಡಾ.ಅಶ್ವಥ್ ನಾರಾಯಣ್ ತಿಳಿಸಿದರು.

ಓಮಿಕ್ರಾನ್ ವೇಗವಾಗಿ ಹರಡುವ ವೈರಸ್. ಲಾಕ್ಡೌನ್ ಮಾಡಬಾರದು ಅನ್ನೋದೇ ಸರ್ಕಾರದ ಮೂಲ ಉದ್ದೇಶ. ಅದಕ್ಕೆ ಪೂರ್ವಭಾವಿಯಾಗಿ ಸಣ್ಣ ಸಣ್ಣ ನಿರ್ಧಾರಗಳನ್ನ ತೆಗೆದುಕೊಂಡಿದ್ದೇವೆ ಎಂದು ವಿವರಿಸಿದರು.

ಜೀವನಾಂಶಕ್ಕೆ ಸಮಸ್ಯೆ ಆಗಬಾರದು. ಬದುಕಿ ಬಾಳಲು ಅವಕಾಶ ಕೊಡಬೇಕು. ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೇಸ್ ಹೆಚ್ಚುತ್ತಿರುವ ವಿಚಾರಕ್ಕೆ ಗಡಿಗಳನ್ನ ಬಂದ್ ಮಾಡಲು ಅವಕಾಶವಿಲ್ಲ. ನಿರ್ವಹಣೆ ಮಾಡಬಹುದು, ಟೆಸ್ಟಿಂಗ್ ಮಾಡಿ ಕಡಿವಾಣ ಹಾಕಬಹುದು ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ