ನೆಲಕ್ಕೆ ಬಿದ್ದರೂ ಮಹಿಳೆ ಮೇಲೆ ನೀಚರಿಬ್ಬರು ಮಾಡಿದ್ರು ಆ ಕೆಲಸ

ಶುಕ್ರವಾರ, 10 ಜನವರಿ 2020 (18:38 IST)

ಮಹಿಳೆಯೊಬ್ಬರು ನೆಲಕ್ಕೆ ಬಿದ್ದರೂ ಬಿಡದೇ ದುಷ್ಕರ್ಮಿಗಳು ನೀಚ ಕೆಲಸ ಮಾಡಿ ಪರಾರಿಯಾಗಿದ್ದಾರೆ.
 

ಯಾದಗಿರಿಯ ಲಕ್ಷ್ಮಿ ನಗರದಲ್ಲಿ ಘಟನೆ ನಡೆದಿದ್ದು, ಪದ್ಮಾವತಿ ಎನ್ನುವವರ ಕೊರಳಲ್ಲಿ ಇದ್ದ 40 ಗ್ರಾಮ್ ನ ಮಾಂಗಲ್ಯವನ್ನು ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಎಗರಿಸಿಕೊಂಡು ಹೋಗಿದ್ದಾರೆ.

ಚೈನ್ ಎಳೆದ ರಭಸಕ್ಕೆ ಪದ್ಮಾವತಿ ನೆಲಕ್ಕೆ ಬಿದ್ದಿದ್ದಾರೆ. ಆದರೂ ಬಿಡದೆ ಮಹಿಳೆಯ ಸರವನ್ನು ಎಗರಿಸಿ ಪರಾರಿಯಾಗಿದ್ದಾರೆ ಕಳ್ಳರು.

ಸಿಸಿಟಿವಿಯಲ್ಲಿ ದುಷ್ಕರ್ಮಿಗಳ ಕೃತ್ಯ ಸೆರೆಯಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ