ಸಚಿವ ಕೆಜೆ ಜಾರ್ಜ್ ವಿರುದ್ಧ ಗಂಭೀರ ಆರೋಪ ಮಾಡಿದ ಜಗದೀಶ್ ಶೆಟ್ಟರ್

ಭಾನುವಾರ, 14 ಜನವರಿ 2018 (12:18 IST)
ಬೆಂಗಳೂರು: ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ವಿರುದ್ಧ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಗಂಭೀರ ಆರೋಪ ಮಾಡಿದ್ದಾರೆ.
 

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್ ಬಿಬಿಎಂಪಿ ಮಹಿಳಾ ಅಧಿಕಾರಿಯೊಬ್ಬರನ್ನು ಅಮಾನತು ಮಾಡಿದ ಆರೋಪ ಮಾಡಿದ್ದಾರೆ.

ಎಚ್ ಬಿಆರ್ ಲೇಔಟ್ ನ ಮಹಿಳಾ ಅಧಿಕಾರಿ ಜಯಾ ಎಂಬವರನ್ನು ವರ್ಗಾವಣೆ ಮಾಡಿ 18 ದಿನಗಳಿಗೆ ಅಮಾನತು ಮಾಡಿದ್ದಾರೆ. ಆ ಸ್ಥಾನಕ್ಕೆ ತಮಗೆ ಬೇಕಾದ ಎಆರ್ ಒನನ್ನು ನೇಮಕ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಸಚಿವರ ವಿರುದ್ಧ ಶೆಟ್ಟರ್ ಆರೋಪ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ