ಎಚ್.ಡಿ. ಕುಮಾರಸ್ವಾಮಿ ಮೇಲೆ ನೋಟಿನ ದಾಳಿ

ಬುಧವಾರ, 19 ಏಪ್ರಿಲ್ 2017 (20:51 IST)
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮೇಲೆ ಕಾರ್ಯಕರ್ತನೊಬ್ಬ ನೋಟುಗಳ ಕಂತೆ ಕಂತೆಯನ್ನು ಎಸೆದು ಅಭಿಮಾನ ಮೆರೆದಿದ್ದಾನೆ.
 
ಜಿಲ್ಲೆಯ ಬೆಳ್ಳೂರು ಕ್ರಾಸ್‌ ಬಳಿ ಕುಮಾರಸ್ವಾಮಿ ಆಗಮಿಸುತ್ತಿದ್ದಂತೆ ಕೆಲವರು ಹಾರ ಹಾಕಿ ಅವರನ್ನು ಸ್ವಾಗತಿಸುತ್ತಿದ್ದರೆ ಕಾರ್ಯಕರ್ತನೊಬ್ಬ ಅವರ ಮೇಲೆ ನೋಟುಗಳ ಸುರಿಮಳೆಗೈದಿದ್ದಾನೆ.
 
ಇದರಿಂದ ಅಸಮಾಧಾನಗೊಂಡ ಕುಮಾರಸ್ವಾಮಿ ನೋಟುಗಳನ್ನು ಎಸೆಯದಂತೆ ತಾಕೀತು ಮಾಡಿದ್ದಾರೆ. ರಾಜ್ಯ ಭೀಕರ ಬರಗಾಲ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ನೋಟು ಎಸೆಯುವ ವರ್ತನೆ ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ