ಸಿಎಂ ಕಾಲಿಗೆ ಬಿದ್ದ ಜೆಡಿಎಸ್ ಶಾಸಕ

ಗುರುವಾರ, 12 ಡಿಸೆಂಬರ್ 2019 (11:29 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರ  ಕಾಲಿಗೆ ಬಿದ್ದು ಜೆಡಿಎಸ್ ಶಾಸಕರೊಬ್ಬರು ಅವರ ಆಶೀರ್ವಾದ ಪಡೆದಿದ್ದಾರೆ.



ಇಂದು ಸಿಎಂ ಯಡಿಯೂರಪ್ಪ ಆದಿಚುಂಚನಗಿರಿಗೆ ಭೇಟಿ ನೀಡಿದ ವೇಳೆ ಅಲ್ಲಿಗೆ ಬಂದಿದ್ದ ನಾಗಮಂಗಲದ ಜೆಡಿಎಸ್ ಶಾಸಕ ಸುರೇಶ್ ಗೌಡ ಸಿಎಂ ಯಡಿಯೂರಪ್ಪ ಅವರನ್ನು ಸ್ವಾಗತಿಸಿ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದಾರೆ.


ಆದಿಚುಂಚನಗಿರಿಗೆ ಭೇಟಿ ನೀಡಿದ ಸಿಎಂ ಯಡಿಯೂರಪ್ಪ ಅವರಿಗೆ ಆರ್ ಅಶೋಕ್, ಶಾಸಕ ನಾರಾಯಣಗೌಡ ಸಾಥ್ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ