ಗೆಲುವಿನ ಖುಷಿಯಲ್ಲಿ ಹೋಳಿಗೆ ಊಟ ಮಾಡಿದ ಬಿಜೆಪಿ ನಾಯಕರು

ಮಂಗಳವಾರ, 10 ಡಿಸೆಂಬರ್ 2019 (09:24 IST)
ಬೆಂಗಳೂರು: ಉಪ ಚುನಾವಣೆಯಲ್ಲಿ 12 ಸ್ಥಾನ ಗೆದ್ದು ಸರ್ಕಾರ ಸುಭದ್ರವಾದಂತೆ ಬಿಜೆಪಿ ನಾಯಕರಲ್ಲಿ ಸಂಭ್ರಮ ಮನೆ ಮಾಡಿದೆ. ನಿನ್ನೆ ಸಿಎಂ ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಬಿಜೆಪಿ ನಾಯಕರೊಂದಿಗೆ ಗೆಲುವಿನ ಸಂಭ್ರಮವಾಚರಿಸಿದ್ದಾರೆ.


ತಮ್ಮ ಮನೆಯಲ್ಲಿ ಬಿಜೆಪಿ ನಾಯಕರಿಗೆ ಗೆಲುವಿನ ಸಿಹಿ ಊಟ ಹಾಕಿರುವ ಯಡಿಯೂರಪ್ಪ ಗೆಲುವಿಗಾಗಿ ದುಡಿದ ನಾಯಕರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಹೋಳಿಗೆ ಊಟದ ಜತೆಗೆ ಬಿಜೆಪಿ ನಾಯಕರು ಸಿಎಂ ಯಡಿಯೂರಪ್ಪನವರನ್ನು ಅಭಿನಂದಿಸಿ ಖುಷಿ ಹಂಚಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ