ಬೇಬಿ ಬೆಟ್ಟದ ಕ್ವಾರಿಯಲ್ಲಿ ದನಕಾಯುವವನ ಕಣ್ಣಿಗೆ ಬಿತ್ತು ಸ್ಫೋಟಕ!

ಶನಿವಾರ, 17 ಜುಲೈ 2021 (14:26 IST)
ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನಲ್ಲರುವ ಬೇಬಿ ಬೆಟ್ಟದಲ್ಲಿ ದನ ಮೇಯಿಸಲು ಹೋದ ವ್ಯಕ್ತಿಯೊಬ್ಬರಿಗೆ ಕಲ್ಲು ಗಣಿಗಾರಿಕೆಗೆ ಉಪಯೋಗಿಸುವ ಸ್ಪೋಟಕಗಳು ಕಾಣಿಸಿಕೊಂಡಿವೆ.
ಬೆಟ್ಟದ ಕಲ್ಲು ಬಂಡೆಗಳ ಮರೆಯಲ್ಲಿ ಜಿಲಿಟಿನ್ ಕಡ್ಡಿಗಳು ಹಾಗೂ ಇತರ ವಸ್ತುಗಳನ್ನು ಬಚ್ಚಿಡಲಾಗಿದ್ದು, ದನ ಮೇಯಿಸವ ವ್ಯಕ್ತಿಯ ಕಣ್ಣಿಗೆ ಕಾಣಿಸಿಕೊಂಡಿದ್ದು, ಪೊಲೀಸರ ಗಮನಕ್ಕೆ ತಂದಿದ್ದಾರೆ. ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗಷ್ಟೇ ಸಂಸದೆ ಸುಮಲತಾ ಅಂಬರೀಶ್ ಬೇಬಿ ಬೆಟ್ಟಕ್ಕೆ ಭೇಟಿ ನೀಡಿ ಕೆಆರ್ ಎಸ್ ಜಲಾಶಯಕ್ಕೆ ಹಾನಿ ಮಾಡುವ ಅಕ್ರಮ ಗಣಿಗಾರಿಕೆ ಕುರಿತು ಪರಿಶೀಲನೆ ನಡೆಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ