ಕನ್ಹೈಯ್ಯ ನಿರಪರಾಧಿ ಎಂದು ಸಾಬೀತಾಗಿಲ್ಲ!

ಗುರುವಾರ, 2 ಮಾರ್ಚ್ 2017 (07:54 IST)
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕನ್ಹೈಯ್ಯ ಕುಮಾರ್ ದೇಶದ್ರೋಹದ ಆರೋಪದಿಂದ ಮುಕ್ತನಾಗಿಲ್ಲ. ತನಿಖೆ ಇನ್ನು ಮುಂದುವರೆದಿದೆ, ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಕನ್ನೈಯ್ಯ ಕುಮಾರ್ ದೋಷಮುಕ್ತನಾಗಿದ್ದಾನೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿದ್ದರಿಂದ ಪೊಲೀಸರು ಈ ಸ್ಪಷ್ಟನೆಯನ್ನು ನೀಡಿದ್ದಾರೆ.
ಕನ್ನೈಯ್ಯನ ಧ್ವನಿಮಾದರಿ ಪರೀಕ್ಷಿಸಿದಾಗ ಘೋಷಣೆ ಕೂಗಿದವರಲ್ಲಿ ಆತ ಇರಲಿಲ್ಲ ಎಂಬುದು ಸಾಬೀತಾಗಿತ್ತು. ಅಷ್ಟೇ ಅಲ್ಲದೆ ಆ ಸಮಯದಲ್ಲಿ ಆತ ಅಲ್ಲಿರಲಿಲ್ಲ, ಹೀಗಾಗಿ ದೇಶದ್ರೋಹ ಆರೋಪದಿಂದ ಆತ ಮುಕ್ತನಾಗಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. 
 
ಆದರೆ ದೆಹಲಿ ಪೊಲೀಸ್ ವಿಶೇಷ ಘಟಕದ ಉಪಾಯುಕ್ತ್ತ ಪ್ರಮೋದ ಸಿಂಗ್ ಕುಶವಾ ನಮ್ಮ ತನಿಖೆ ಇನ್ನು ಪೂರ್ಣಗೊಂಡಿಲ್ಲ, ಆರೋಪಪಟ್ಟಿಯೇ ಸಿದ್ಧಗೊಂಡಿಲ್ಲ ಎಂದಿದ್ದಾರೆ.
 
ಧ್ವನಿ ಮಾದರಿ ಪರೀಕ್ಷೆ ಮಾಡಲಾಗಿ  ಘೋಷಣೆ ಕೂಗಿದ ಧ್ವನಿ ಕನ್ನೈಯ್ಯನವರ ಧ್ವನಿಗೆ ಹೋಲಿಕೆಯಾಗುತ್ತಿಲ್ಲ.ದೇಶವಿರೋಧಿ ಘೋಷಣೆ ಕೂಗಿದವರೆಲ್ಲರೂ ಕಾಶ್ಮೀರದವರೆಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬರು ಉಪನ್ಯಾಸಕರು ಎನ್ನಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ