ಕನ್ನಡ ಮಾತನಾಡಲು ಬರದ ಕಾಡುಪಾಪ ರಮ್ಯಾ- ಜಗ್ಗೇಶ್ ಕಿಡಿ

ಸೋಮವಾರ, 5 ಫೆಬ್ರವರಿ 2018 (08:58 IST)

ಎಐಸಿಸಿ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ವಿರುದ್ಧ ಕಿಡಿಕಾರಿದ ನಟ ಜಗ್ಗೇಶ್ ಈಕೆ ಯಾರು? ಸಾಧನೆ ಏನು? ನೆಟ್ಟಗೆ ಕನ್ನಡ ಮಾತಾಡಲು ಬರದ ಕಾಡುಪಾಪ ಎಂದು ವ್ಯಂಗ್ಯವಾಡಿದ್ದಾರೆ.

ರೈತರ ಆದಾಯ ಹೆಚ್ಚಿಸಲು ಟಾಪ್ ಯೋಜನೆ ಜಾರಿಗೆ ತರಲಾಗಿದೆ ಎಂದು ಹೇಳಿದ್ದ ಪ್ರಧಾನಮಂತ್ರಿ ನರೇಂದ್ರಮೋದಿ ಅವರನ್ನು ಟೀಕಿಸಿದ್ದ ರಮ್ಯಾ ಟಾಪ್ ಅಲ್ಲ ಪಾಟ್ ಎಂದು ಟ್ವಿಟ್ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಜಗ್ಗೇಶ್ ವಿಶ್ವದ ಬಲಿಷ್ಠ ನಾಯಕರೇ ಮೋದಿ ಅವರನ್ನು ಒಪ್ಪಿದ್ದಾರೆ. ದೊಡ್ಡವರ ಬಗ್ಗೆ ಮಾತನಾಡುವವರಿಗೆ ವಯಸ್ಸು, ಅನುಭವ ಹಾಗೂ ಸಾಧನೆ ಇರಬೇಕು. ಆಗ ತರ್ಕವನ್ನು ಒಪ್ಪಿ ಜನ ವಿಮರ್ಶೆ ನಿರ್ಣಯಿಸುತ್ತಾರೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ