ಮಹಾತ್ಮ ಗಾಂಧೀಜಿ ಮೇಲೂ ಆರ್‌ಎಸ್‌ಎಸ್ ಅದೇ ತಂತ್ರವನ್ನು ಹೆಣೆದಿತ್ತು: ರಾಹುಲ್ ಗಾಂಧೀಜಿ

Sampriya

ಮಂಗಳವಾರ, 26 ಆಗಸ್ಟ್ 2025 (18:50 IST)
Photo Credit X
ನವದೆಹಲಿ: ವೈಯ್ಯಕ್ತಿಕ ದಾಳಿಯ ಮೂಲಕನೇ ಆರ್‌ಎಸ್‌ಎಸ್‌ ತನ್ನ ವಿರೋಧಿಗಳನ್ನು ಗುರಿಯಾಗಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪಿಸಿದ್ದಾರೆ. 

ಬಿಹಾರದ ಮಹಾಘಟಬಂಧನ್ ಮಿತ್ರರೊಂದಿಗೆ ಸಂವಾದದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಈ ಮಾತನ್ನು ಹೇಳಿದ್ದಾರೆ. ಅದರ ವೀಡಿಯೊವನ್ನು ಅವರು ನಂತರ ತಮ್ಮ ಎಕ್ಸ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದಾರೆ. 

ಆರ್‌ಎಸ್‌ಎಸ್ ದಾಳಿಯ ವಿಧಾನವೆಂದರೆ ವೈಯಕ್ತಿಕ ದಾಳಿ. 
ಅದೇ ತಂತ್ರವನ್ನು ಮಹಾತ್ಮ ಗಾಂಧಿ ವಿರುದ್ಧ ಬಳಸಲಾಗಿದೆ ಎಂದು ಹೇಳಿದ್ದಾರೆ. . ಆರ್‌ಎಸ್‌ಎಸ್‌ನಿಂದ ಗಾಂಧೀಜಿ ಅವರ ಮೇಲೆ
ಎಷ್ಟು ನಿಂದನೆ ಮತ್ತು ಮಾನನಷ್ಟವಾಗಿದೆ ಎಂಬುದು ಜನರಿಗೆ ತಿಳಿದಿಲ್ಲ, ನೆನಪಿಲ್ಲ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ