ಸರ್ಕಾರದ ವಿರುದ್ಧ ‘ಕೈ’ ಪ್ರತಿಭಟನೆ

ಭಾನುವಾರ, 25 ಸೆಪ್ಟಂಬರ್ 2022 (20:58 IST)
ರಾಜ್ಯದಲ್ಲಿ ಕೈ-ಕಮಲ ಪಡೆ ನಡುವೆ ಪೋಸ್ಟರ್​ ವಾರ್​​​ ತಾರಕಕ್ಕೇರಿದೆ. PayCm ಎಂದು ಕಾಂಗ್ರೆಸ್​​​ BJP ವಿರುದ್ಧ ವಾಗ್ದಾಳಿ ನಡೆಸಿದ್ರೆ, ಇದಕ್ಕೆ ಪ್ರತಿಯಾಗಿ BJP, ಕಾಂಗ್ರೆಸ್​ ವಿರುದ್ಧ ವ್ಯಂಗ್ಯವಾಗಿ ಪೋಸ್ಟ್​​ ಹಾಕಿ ತಿರುಗೇಟು ನೀಡ್ತಿದೆ. PayCm ಬ್ಯಾನರ್ ಅಭಿಯಾನ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ PayCm ಬ್ಯಾನರ್ ಅಂಟಿಸಿ‌ ಕೈ ನಾಯಕರು ಪ್ರತಿಭಟನೆ ನಡೆಸಿದ್ರು. ಶಾಸಕ ನಾಗೇಂದ್ರ, ರಾಜ್ಯಸಭಾ ಸದಸ್ಯ ಸೈಯದ್ ನಾಸೀರ್ ಹುಸೇನ್ ಹಾಗೂ ಕೈ ನಾಯಕರು ಬ್ಯಾನರ್ ಪ್ರದರ್ಶನ ಮಾಡಿ ಪ್ರತಿಭಟನೆ ನಡೆಸಿದ್ರು. ನಗರದ ಗವಿಯಪ್ಪ ಸರ್ಕಲ್​​​​​​ ನಲ್ಲಿ ಬ್ಯಾನರ್ ಅಂಟಿಸಿದ ಕಾಂಗ್ರೆಸ್​​​ ನಾಯಕರು BJP ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ