ಕಪ್ಪತ್ತಗುಡ್ಡ ವನ್ಯಜೀವಿಧಾಮ ಘೋಷಣೆ ವಿಚಾರ; 14 ಕಲ್ಲಿನ ಕ್ವಾರಿಗಳ ಸ್ಥಗಿತಕ್ಕೆ ನೋಟಿಸ್

ಮಂಗಳವಾರ, 29 ಸೆಪ್ಟಂಬರ್ 2020 (10:31 IST)
ಗದಗ : ಕಪ್ಪತ್ತಗುಡ್ಡ ವನ್ಯಜೀವಿಧಾಮ ಘೋಷಣೆ ವಿಚಾರ 14 ಕಲ್ಲಿನ ಕ್ವಾರಿಗಳನ್ನು ತಕ್ಷಣ ಸ್ಥಗಿತ ಮಾಡಲು ನೋಟಿಸ್ ನೀಡಲಾಗಿದೆ.

ಕೇಂದ್ರದ ಪರಿಸರ ಮತ್ತು ಅರಣ್ಯ ಸಚಿವಾಲಯ ಆದೇಶದ ಹಿನ್ನಲೆಯಲ್ಲಿ  ಗಣಿ ಇಲಾಖೆಯಿಂದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ವ್ಯಾಪ್ತಿಯ 14 ಕಲ್ಲಿನ ಕ್ವಾರಿ ಸ್ಥಗಿತಕ್ಕೆ ನೋಟಿಸ್ ನೀಡಲಾಗಿದೆ. ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ. ವ್ಯಾಪ್ತಿಯಲ್ಲಿ ಈ ಕ್ವಾರಿ ಬರಲಿದೆ.

ಗಣಿ ಇಲಾಖೆ ಅನುಮತಿ ಪಡೆದಿದ್ದ ಕಲ್ಲು ಗಣಿ ಮಾಲೀಕರು  ಈಗ ನೋಟಿಸ್ ಹಿನ್ನಲೆಯಲ್ಲಿ ಕಂಗಾಲಾಗಿದ್ದಾರೆ. ಅಲ್ಲದೇ ಕಲ್ಲು ಗಣಿ ಉಳಿಸಿಕೊಳ್ಳಲು  ಲಾಬಿ ನಡೆಸುತ್ತಿರುವ ಆರೋಪ  ಕೇಳಿಬಂದಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ