Karkala: ಸಜೀವ ದಹನವಾದ ಕಂಬಳದ ಚಾಂಪಿಯನ್ ಕೋಣಗಳಿಗೆ ಒಡೆಯನ ಕಣ್ಣೀರ ವಿದಾಯ video

Sampriya

ಶನಿವಾರ, 31 ಮೇ 2025 (18:24 IST)
Photo Credit X
ಮಂಗಳೂರು: 2022–23ನೇ ಸಾಲಿನ ಕನಹಲಗೆಯಲ್ಲಿ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಅಪ್ಪು ಮತ್ತು ತೋನ್ಸೆ ಕಂಬಳದ ಕೋಣಗಳು ದುರಂತವಾಗಿ ಸಾವನ್ನಪ್ಪಿದೆ.

ಮೇ 30ರಂದು ರಾತ್ರಿ ಕಾರ್ಕಳ ತಾಲ್ಲೂಕಿನ ಕಾಂಂತಾವರ ಗ್ರಾಮದ ಬೇಲಾಡಿಯಲ್ಲಿ ವಿದ್ಯುತ್ ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಹಟ್ಟಿಗೆ ಬೆಂಕಿ ತಗುಲಿ ಕೋಣಗಳು ಸಜೀವ ದಹನವಾಗಿದೆ.

2022 ಹಾಗೂ 2023ನೇ ಕಂಬಳ ಸಾಲಿನಲ್ಲಿ ಕನಹಲಗೆಯಲ್ಲಿ ಬೇಲಾಡಿ ಬಾವ ಅಶೋಕ್ ಶೆಟ್ಟಿಯವರ ಕೋಣಗಳು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದವು.

ಕೋಣಗಳನ್ನ ಕಳೆದುಕೊಂಡ ಅಶೋಕ್ ಶೆಟ್ಟಿಯವರ ದುಃಖ ಮುಗಿಲು ಮುಟ್ಟಿದೆ. ಎರಡು ಕೋಣಗಳಿಗೂ ವಿಧಿ ವಿಧಾನಗಳಲ್ಲಿ ಅಂತ್ಯಕ್ರಿಯೆಯನ್ನು ನಡೆಸಲಾಯಿತು. ಬಿಳಿ ಬಟ್ಟೆ ಹಾಗೂ ಕೆಂಪು ಬಟ್ಟೆಯನ್ನು ಹಾಕಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಕೋಣಗಳಿಗೆ ಕೊನೆಗೆ ನೀರು ಬಿಡುವಾಗ ತಮ್ಮ ಮುದ್ದಿನ ಕೋಣಗಳ ಅಗಲಿಕೆಯನ್ನು ನೆನೆದು  ಅಶೋಕ್ ಶೆಟ್ಟಿವರು ಕಣ್ಣೀರು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ.

#Karkala #Kambala ಕಂಬಳ ಕೋಣಗಳ ಅಂತ್ಯಕ್ರಿಯೆಯಲ್ಲಿ ಭಾವುಕರಾದ ಮಾಲಿಕ. ಹೃದಯಸ್ಪರ್ಶಿ ವಿಡಿಯೋ pic.twitter.com/VJOedU3N0r

— Webdunia Kannada (@WebduniaKannada) May 31, 2025
ತಾನು ಮುದ್ದಾಗಿ ಸಾಕಿದ ಕೋಣಗಳನ್ನು ಕಳೆದುಕೊಂಡ ಅಶೋಕ್ ಶೆಟ್ಟಿಯವರು  ಕಣ್ಣೀರು  ನೋಡಿ, ಎಲ್ಲರೂ ಕಣ್ಣೀರು ಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ವಿಡಿಯೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ