ಕರ್ನಾಟಕ ಬಂದ್: ಕಲ್ಲು ತೂರುವವರಿಂದ ರಕ್ಷಣೆ ಪಡೆಯಲು ಮಾಲ್ ಗಳಲ್ಲಿ ಮಾಡಿದ್ದೇನು ಗೊತ್ತಾ?!

ಗುರುವಾರ, 25 ಜನವರಿ 2018 (09:04 IST)
ಬೆಂಗಳೂರು: ಕರ್ನಾಟಕ ಬಂದ್ ಬಿಸಿಗೆ ರಾಜ್ಯ ರಾಜಧಾನಿ ಸ್ತಬ್ಧವಾಗಿದೆ. ಹಾಗಿದ್ದರೂ ಬಂದ್ ನ ಲಾಭ ಪಡೆಯುವ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸದಂತೆ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.
 

ಈ ನಡುವೆ ಬಂದ್ ಬಿಸಿ ಶಾಪಿಂಗ್ ಮಾಲ್ ಗಳಿಗೂ ತಟ್ಟಿದೆ. ಕರ್ನಾಟಕ ಬಂದ್ ನಿಂದಾಗಿ ಮಂತ್ರಿ ಮಾಲ್, ಒರಾಯನ್ ಮಾಲ್ ಗಳೂ ಎಂದಿನ ಚಟುವಟಿಕೆಯಿಲ್ಲದೇ ಸ್ತಬ್ಧವಾಗಿದೆ.

ಈ ನಡುವೆ ಮಂತ್ರಿ ಮಾಲ್ ನಲ್ಲಿ ಗಾಜಿನ ಅಲಂಕಾರಿಕ ಕಿಟಿಕಿಗಳಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪುಡಿ ಪುಡಿ ಮಾಡಬಹುದೆಂಬ ಭಯಕ್ಕೆ ನೆಟ್ ಹಾಕಿ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲದೆ, ಪೊಲೀಸರೂ ಸರ್ಪಗಾವಲು ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ