Karnataka Weather: ಅಬ್ಬಾ.. ಇಂದಿನ ರಾಜ್ಯದ ತಾಪಮಾನ ಎಷ್ಟಿದೆ ಗೊತ್ತಾ

Krishnaveni K

ಶುಕ್ರವಾರ, 27 ಮಾರ್ಚ್ 2026 (08:25 IST)
ಬೆಂಗಳೂರು: ಅಲ್ಲಲ್ಲಿ ಮಳೆಯ ನಡುವೆಯೂ ರಾಜ್ಯದಲ್ಲಿ ಬಿಸಿಲಿನ ತಾಪ ದಿನೇ ದಿನೇ ಹೆಚ್ಚಾಗುತ್ತಿದೆ. ಇಂದು ತಾಪಮಾನ ಮತ್ತಷ್ಟು ಏರಿಕೆಯಾಗಲಿದ್ದು ಇಂದಿನ ಹವಾಮಾನ ವರದಿ ಇಲ್ಲಿದೆ ನೋಡಿ.

ರಾಜ್ಯದಲ್ಲಿ ಈಗ ಕೆಲವೆಡೆ ಅಲ್ಲಲ್ಲಿ ಗಾಳಿ, ಗುಡುಗು ಸಹಿತ ಮಳೆಯಾಗುತ್ತಿದೆ. ಇದರ ಜೊತೆಗೆ ತಾಪಮಾನದಲ್ಲೂ ಗಣನೀಯವಾಗಿ ಏರಿಕೆಯಾಗುತ್ತಿದೆ. ಮಳೆ ಬಂದರೂ ಬಿಸಿಲು, ಸೆಖೆ ಕಡಿಮೆಯಾಗಿಲ್ಲ. ಇಂದು ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

ಇಂದು ರಾಜ್ಯದ ಗರಿಷ್ಠ ತಾಪಮಾನ ಸರಾಸರಿ 35 ಡಿಗ್ರಿ ತಲುಪಲಿದ್ದು ಇದು ನಿನ್ನೆಗೆ ಹೋಲಿಸಿದ ಹೆಚ್ಚಾಗಲಿದೆ. ಇಂದು ಕನಿಷ್ಠ ತಾಪಮಾನ 22 ಡಿಗ್ರಿಯಷ್ಟಾಗಲಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಇಂದು ಇದೇ ಪರಿಸ್ಥಿತಿಯಿರಲಿದೆ.

ಅದರಲ್ಲೂ ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿಯಷ್ಟಾಗಲಿದೆ. ಇನ್ನು ಮೈಸೂರು, ಮಂಡ್ಯ, ವಿಜಯಪುರ, ಯಾದಗಿರಿ, ದಾವಣಗೆರೆ ಜಿಲ್ಲೆಗಳಲ್ಲಿ ಇಂದು ಗರಿಷ್ಠ ತಾಪಮಾನ 37 ಡಿಗ್ರಿ ತಲುಪಲಿದೆ. ಉಳಿದ ಜಿಲ್ಲೆಗಳಲ್ಲಿ ಇಂದು ಗರಿಷ್ಠ ತಾಪಮಾನ 36 ಡಿಗ್ರಿಯಷ್ಟಿರಲಿದೆ. ನಿನ್ನೆಗೆ ಹೋಲಿಸಿದರೆ ಇಂದು ಮತ್ತಷ್ಟು ಉರಿಬಿಸಿಲು, ಸೆಖೆಯಿರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ