ಕೆ.ಡಿ.ಎ. ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿ

ಮಂಗಳವಾರ, 4 ಡಿಸೆಂಬರ್ 2018 (19:19 IST)
ಕೆ.ಡಿ.ಎ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿದರು.

 ಕಲಬುರಗಿ ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಕುಸನೂರ ಹಾಗೂ ಧರಿಯಾಪುರ-ಕೋಟನೂರ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಿಗೆ ಭೆಟಿ ನೀಡಿ ಪರಿಶೀಲಿಸಿದರು.

ಕುಸನೂರ ಸರ್ವೇ ನಂಬರ 83 ಹಾಗೂ 87ರಲ್ಲಿ 33 ಎಕರೆ 7 ಗುಂಟಾ ಪ್ರದೇಶದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದಿಂದ ವಿನೂತನ ಮಾದರಿಯಲ್ಲಿ ಉದ್ಯಾನವನ ಅಭಿವೃದ್ಧಿ ಪಡಿಸಲಾಗುತ್ತಿದೆ. ಈಗಾಗಲೆ ಉದ್ಯಾನವನಕ್ಕೆ 1200 ಮೀಟರ್ ಆವರಣ ನಿರ್ಮಿಸಲಾಗಿದೆ. ಇನ್ನುಳಿದ 300 ಮೀಟರ ಆವರಣ ಗೋಡೆ ನಿರ್ಮಾಣಕ್ಕೆ ಟೆಂಡರ್ ಕರೆಯಲಾಗಿದ್ದು, ಆದಷ್ಟು ಬೇಗ ಕಾಮಗಾರಿ ಪ್ರಾರಂಭಿಸಬೇಕೆಂದು ಸೂಚಿಸಿದರು.

ಉದ್ಯಾನವನಕ್ಕೆ ಗುರುತಿಸಲಾದ ಪ್ರದೇಶದಲ್ಲಿ 3 ಭಾವಿಗಳಿದ್ದು, ಅವುಗಳನ್ನು ನಾಶಮಾಡದೆ ಸಂರಕ್ಷಿಸಬೇಕು. ಭಾವಿಗಳ ಆಳ ಹೆಚ್ಚಿಸಬೇಕು. ಭಾವಿಗಳ ಸುತ್ತಲು ರಕ್ಷಣಾಗೋಡೆ ನಿರ್ಮಿಸಬೇಕು. ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾದಾಗ ಈ ಭಾವಿಗಳಿಂದ ನೀರು ಸರಬರಾಜು ಮಾಡಬಹುದಾಗಿದೆ. ಈ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕೆರೆ ಸಹ ನಿರ್ಮಿಸಬೇಕೆಂದು ಸೂಚನೆ ನೀಡಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ