ಹಂದಿಗಳನ್ನ ಕದ್ದಿಯುತ್ತಿದ್ದ ಖತರ್ನಾಕ್ ಗ್ಯಾಂಗ್ ಅಂದರ್..!

ಶುಕ್ರವಾರ, 19 ಆಗಸ್ಟ್ 2022 (14:20 IST)
ಸಾಕಾಣಿಕ ಹಂದಿಗಳನ್ನ ಕಳ್ಳತನ ಮಾಡ್ತಿದ್ದ ಖತರ್ನಾಕ್ ಗ್ಯಾಂಗ್ ನ್ನ ಇಂದು ಚಿಕ್ಕಜಾಲ ಪೊಲೀಸರು ಬಂಧನ ಮಾಡಿದ್ದಾರೆ.ಸುಮಾರು ಹತ್ತುಕ್ಕೂ ಹೆಚ್ಚು ಮಂದಿ ಆರೋಪಿಗಳನ್ನ ಬಂಧನ ಮಾಡಿದ್ದಾರೆ.
 
ಹುಣಸೇಮಾರನಹಳ್ಳಿ ಬಳಿ ಶೆಡ್ ನಲ್ಲಿ ಎಂಬತ್ತು ಸಾಕಾಣಿಕ ಹಂದಿಗಳನ್ನ ಎರಡು ಟೆಂಪೋಗಳಿಗೆ ಆಸಾಮಿಗಳು ತುಂಬುತ್ತಿದ್ದರು.ಇಪ್ಪತ್ತು ಲಕ್ಷ ಮೌಲ್ಯದ ಹಂದಿಗಳನ್ನ ತುಂಬುತ್ತಿದ್ದು,ಶೆಡ್ ಬಳಿ ಮಾಲೀಕ ಬಂದಿದ್ದ.ಇದೇ ವೇಳೆ ಮಾಲೀಕ ಮಗನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.ರಾಯಚೂರಿನಿಂದ ಬಂದು ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಸಾಕಾಣಿಕೆ ಹಂದಿಗಳನ್ನ ಗ್ಯಾಂಗ್ ಕದಿಯುತ್ತಿತ್ತು.ಇನ್ನು ಈ ಪ್ರಕರಣ ದಾಖಲಿಸಿಕೊಂಡು ಬಂಧನ ಮಾಡಲು ಹೋದ ಪೊಲೀಸರ ಮೇಲೆಯೂ ಹಲ್ಲೆ ಮಾಡಿದ್ದಾರೆ.ಕಳ್ಳತನ ಮಾಡಿದ್ದ ಹಂದಿಗಳನ್ನ ಕಡಿಮೆ ಹಣಕ್ಕೆ  ರಾಯಚೂರಿನ ಕಿರಣ್  ಎಂಬಾಂತ ಮಾರಾಟ ಮಾಡುತ್ತಿದ್ದ.ಈಗ ಎಲ್ಲರನದನ ಬಂಧಿಸಿದ್ದು ಇನ್ನೂ ಈ ಪ್ರಕರಣ ಇದೀಗ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ  ದಾಖಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ