ಕೊಲ್ಲೂರು ದೇವಾಲಯದ ಊಟ ಕಾಂಗ್ರೆಸ್ ಸಮಾವೇಶಕ್ಕೆ!

ಮಂಗಳವಾರ, 9 ಜನವರಿ 2018 (09:44 IST)
ಮಂಗಳೂರು: ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಬಿಸಿಯೂಟವನ್ನು ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಸಾಧನಾ ಸಮಾವೇಶದಲ್ಲಿ ಪೂರೈಸಿದ್ದು ಇದೀಗ ವಿವಾದಕ್ಕೆ ಗುರಿಯಾಗಿದೆ.
 

ಕಲ್ಲಡ್ಕದ ಖಾಸಗಿ ಶಾಲೆಗೆ ಮೂಕಾಂಬಿಕಾ ದೇವಾಲಯದ ಊಟವನ್ನು ಬಿಸಿಯೂಟಕ್ಕೆ ಸರಬರಾಜು ಮಾಡುವುದನ್ನು ತಡೆಹಿಡಿದ ಸರ್ಕಾರ ಇದೀಗ ತನ್ನ ಸಾಧನಾ ಸಮಾವೇಶಕ್ಕೆ ದೇವಾಲಯದ ಊಟ ತರಿಸಿಕೊಂಡಿದ್ದು ಸರಿಯೇ ಎಂಬುದು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಊಟ ಸರಬರಾಜಾಗುತ್ತಿರುವ ಫೋಟೋಗಳನ್ನು ಪ್ರಕಟಿಸಿದೆ. ಆದರೆ ಮೂಕಾಂಬಿಕಾ ದೇವಾಲಯದ ಟ್ರಸ್ಟ್ ಅಧಿಕಾರಿಗಳು ಸರ್ಕಾರದ ಸಮಾವೇಶಕ್ಕೆ ದೇವಾಲಯದ ಊಟ ನೀಡಿದರೆ ತಪ್ಪಿಲ್ಲ. ಇದಕ್ಕಾಗಿ ದೇವಾಲಯಕ್ಕೆ 1 ಲಕ್ಷ ರೂ. ಪಾವತಿ ಮಾಡಲಾಗಿತ್ತು ಎಂದು ಸ್ಪಷ್ಟನೆ ಕೊಟ್ಟಿದ್ದಾರೆ. ಹಾಗಿದ್ದರೂ ಇದು ವಿವಾದ ಸ್ವರೂಪ ಪಡೆದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ