‘ಸೆಗಣಿ ತುಂಬಿದ ಸಿಎಂ ರಾಜ್ಯದಲ್ಲಿರುವುದೇ ನಮಗೆ ಅವಮಾನ’

ಸೋಮವಾರ, 13 ನವೆಂಬರ್ 2017 (10:33 IST)
ಬೆಳಗಾವಿ: ತಮಗೆ ಮೆದುಳೇ ಇಲ್ಲ ಎಂದಿದ್ದ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

 
ಈಶ್ವರಪ್ಪ ತಲೆಯಲ್ಲಿ ಮೆದುಳೇ ಇಲ್ಲ. ಅವರ ತಲೆಯಲ್ಲಿ ಸೆಗಣಿ ತುಂಬಿದೆ ಎಂದು ಸಿಎಂ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಈಶ್ವರಪ್ಪ, ಸೆಗಣಿ ತುಂಬಿರುವ ಸಿಎಂ ಇರುವುದೇ ನಮಗೆ ಅವಮಾನ. ಪ್ರತಿಪಕ್ಷ ನಾಯಕರೊಬ್ಬರ ಬಗ್ಗೆ ಸಿಎಂ ಹುದ್ದೆಯಲ್ಲಿರುವವರು ಹೀಗೆಲ್ಲಾ ಮಾತನಾಡ್ತಾರಾ? ಎಂದು ತಿರುಗೇಟು ನೀಡಿದ್ದಾರೆ.

ಬೆಳಗಾವಿ ಅಧಿವೇಶನಕ್ಕೂ ಮೊದಲು ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸದನದಲ್ಲಿ ಸಚಿವ ಜಾರ್ಜ್ ರಾಜೀನಾಮೆಗೆ ಬಿಜೆಪಿ ಹೋರಾಟ ನಡೆಸಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ