ನಾನು ಜನರ ಭ್ರಮಾ ಲೋಕದಲ್ಲಿದ್ದೇನೆ: ಸಿಎಂಗೆ ಕುಮಾರಸ್ವಾಮಿ ಟಾಂಗ್

ಶುಕ್ರವಾರ, 6 ಏಪ್ರಿಲ್ 2018 (10:41 IST)
ಬೆಂಗಳೂರು: ಕುಮಾರಸ್ವಾಮಿ ಭ್ರಮಾಲೋಕದಲ್ಲಿದ್ದಾರೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ನಾನು ಜನರ ಭ್ರಮಾ ಲೋಕದಲ್ಲಿದ್ದೇನೆ ಎಂದಿದ್ದಾರೆ.

ನಾನು ಬೇರೆ ಯಾವುದೇ ಭ್ರಮಾ ಲೋಕದಲ್ಲಿಲ್ಲ. ಜನರ ಭ್ರಮಾ ಲೋಕದಲ್ಲಿದ್ದೇನೆ. ಜನರು ಕೈ ಬಿಡುವುದಿಲ್ಲ ಎಂಬ ನಂಬಿಕೆಯಲ್ಲಿದ್ದೇನೆ ಎಂದಿದ್ದಾರೆ.

ಜನರ ಸಮಸ್ಯೆ ಬಗ್ಗೆ ಜೆಡಿಎಸ್ ಮಾತ್ರ ಚರ್ಚಿಸುತ್ತಿದೆ. ಜನರು ನನಗೆ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಶಕ್ತಿ ಕೊಟ್ಟಿದ್ದಾರೆ. ಹೀಗಾಗಿ ಅವರೇ ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಲ್ಲಿದ್ದೇನೆ ಎಂದು ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ